
ರಾಯಚೂರು ಲಿಂಗಸುಗೂರು ತಾಲೂಕಿನ ಮುದ್ದಗಲ್ಲು ಮಂಜುನಾಥ (28) ಎಂಬಾತ ಅಕ್ಟೋಬರ್ 3ರಂದು ನಾಪತ್ತೆಯಾಗಿದ್ದು ಈತ ಬಿಳಿ ಶರ್ಟ್, ನೀಲ ಪ್ಯಾಂಟ್ ಹಾಗೂ ಕೆಂಪು ಧರಿಸಿದ್ದು, ಟೋಪಿ ಹಾಕಿದ್ದನು. ಕನ್ನಡ ಭಾಷೆ ಮಾತನಾಡುವ ಈತ ಕಳೆದ ಏಳು ವರ್ಷಗಳ ಹಿಂದೆ ಮಂಜುನಾಥ ಮಿಯ್ಯಾರು ತರಬೇತಿ ಕೇಂದ್ರವೊಂದರಲ್ಲಿ ಕಲೆ ತರಬೇತಿ ಪಡೆದಿದ್ದನು.
ಈ ನಿಟ್ಟಿನಲ್ಲಿ ನಾಪತ್ತೆಯಾಗಿದ್ದ ಯುವಕ ಕಾರ್ಕಳ ಪರಿಸರದಲ್ಲಿ ಇರಬಹುದೆಂಬ ಶಂಕೆಯ ಮೇರೆಗೆ ಮನೆ ಮಂದಿ ಆಯ್ದ ಕಡೆಗಳಲ್ಲಿ ಮಂಜುನಾಥನ ಬಗ್ಗೆ ಮಾಹಿತಿ ಕೇಳಿಕೊಂಡು ಬಂದಿದ್ದಾರೆ. ನಾಪತ್ತೆಯಾಗುವ ಕೆಲ ದಿನಗಳ ಹಿಂದೆ ಮಂಜುನಾಥ ದೈನಂದಿನ ಚಟುವಟಿಕೆಗಳಲ್ಲಿ ಬದಲಾಗಿದ್ದನು ಎಂಬ ಮಾಹಿತಿ ಲಭಿಸಿದೆ.
ಮಂಜುನಾಥ ಕುರಿತು ಮಾಹಿತಿ ಲಭಿಸಿದಲ್ಲಿ ಕೂಡಲೇ ಸ್ಥಳೀಯ ಪೊಲೀಸ್ ಠಾಣೆ ಅಥವಾ ಆತನ ಸಹೋದರ ದುರ್ಗಪ್ಪ ಅವರನ್ನು ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ವಿನಂತಿಸಿದ್ದಾರೆ.
ಮೊಬೈಲ್ ನಂಬ್ರ: 8970463453













