
ಕಾರ್ಕಳ: ಮೇ 4ರಂದು ಗ್ರಾಮಾಂತರ ಪೊಲೀಸ್ ಠಾಣೆಯ ಎ.ಎಸ್.ಐ ಪ್ರಕಾಶ್ ಕುಮಾರ್ ಅವರು ಕಾಂತಾವರ ಗ್ರಾಮದಲ್ಲಿ ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಬೆಳಗಿನ ಜಾವ 1 ಗಂಟೆಯ ವೇಳೆಗೆ ಬಾರಾಡಿ-ಪರಪ್ಪಾಡಿ ರಸ್ತೆಯಲ್ಲಿ ಚಿಲಿಂಬಿ ಕಡೆಯಿಂದ ಪರಪ್ಪಾಡಿ ಕಡೆಗೆ ಸಾಗುತ್ತಿದ್ದ ಟಿಪ್ಪರ್(KL-30-8899) ವಾಹನ ಒಂದನ್ನು ಅನುಮಾನಗೊಂಡು ನಿಲ್ಲಿಸಿದ್ದು ಈ ವೇಳೆ ಅಂದಾಜು 8,000 ರೂ ಮೌಲ್ಯದ ಮರಳು ಇರುವುದು ಪತ್ತೆಯಾಗಿದೆ.
ಸಮವಸ್ತ್ರದಲ್ಲಿದ್ದ ಪೊಲೀಸರನ್ನು ಕಂಡು ಟಿಪ್ಪರ್ ಚಾಲಕ ಪರಾರಿಯಾಗಿದ್ದು ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.