ಕಾಂಗ್ರೆಸ್ ಎಂದರೆ ವಿಭಜನೆ, ಅಲ್ಪಸಂಖ್ಯಾತರ ಓಲೈಕೆ
“ನನ್ನ ತೆರಿಗೆ ನನ್ನ ಹಕ್ಕು”ರಾಜ್ಯ ಸರಕಾರದ ಅಭಿಯಾನದ ಹಿಂದಿನ ದುರುದ್ದೇಶವೇನು…?
🔴ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್

ತೆರಿಗೆ ಪಾಲಿನ ಹೆಸರಿನಲ್ಲಿ ನನ್ನ ತೆರಿಗೆ ನನ್ನ ಹಕ್ಕು ಎಂದು ರಾಜ್ಯದ ಕಾಂಗ್ರೆಸ್ ಸರ್ಕಾರ ಅಭಿಯಾನ ಪ್ರಾರಂಭಿಸಿದಾಗಲೇ ನಾವು ಇದರ ಹಿಂದಿನ ದುರುದ್ದೇಶ ಅರ್ಥಮಾಡಿಕೊಳ್ಳಬೇಕಿತ್ತು ಎಂದು ಟ್ವಿಟ್ ಮೂಲಕ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ತಿಳಿಸಿದ್ದಾರೆ.
ಕಾಂಗ್ರೆಸ್ ನಮ್ಮ ಪಾಲನ್ನು ಯಾರು ಯಾರಗೋ ಕೊಡಲು ಹೊರಟಿದೆ. ಪಾಲು, ಪಾಲು , ಪಾಲು ಎಂದು ದೇಶವನ್ನೇ ಪಾಲು ಮಾಡಿದರು.ಈಗ ಪಿತ್ರಾರ್ಜಿತ ಆಸ್ತಿಯಲ್ಲೂ ಕಾಂಗ್ರೆಸ್ ಪಾಲು ಬೇಡುತ್ತಿದೆ.ಹಿಂದುಳಿದ ವರ್ಗದ ಮೀಸಲು ಪಾಲನ್ನೂ ಮುಸ್ಲಿರಿಗೆ ನೀಡಿದೆ.ಕಾಂಗ್ರೆಸ್ ಎಂದರೆ ವಿಭಜನೆ, ಕಾಂಗ್ರೆಸ್ ಎಂದರೆ ಆಲ್ಪಸಂಖ್ಯಾತರ ಓಲೈಕೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಟ್ವಿಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.