
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ಸಾಣೂರು ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ ಸಾಣೂರು ದೆಂದಬೆಟ್ಟು ಸೇತುವೆಯ ಬಳಿ ರಸ್ತೆಗೆ ಅಡ್ಡಲಾಗಿ ಬೆಳೆದಿರುವ ಗಿಡಗಳ ಮತ್ತು ಸೇತುವೆಯ ಮೇಲೆ ರಸ್ತೆಯಲ್ಲಿ ಹರಡಿರುವ ಕೇಸರು ತ್ಯಾಜ್ಯ ಕಸಕಡ್ಡಿಗಳನ್ನು ತೆರವುಗೊಳಿಸಿ ಸ್ವಚ್ಛ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಈ ಸಂಧರ್ಭ ಸ್ಥಳೀಯ ಗಣ್ಯರು ರಾಜೇಶ್ ಪಿಂಟೋ ಉಪಸ್ಥಿತರಿದ್ದು, ಶೌರ್ಯ ಘಟಕದ ಸೇವಾಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು
