30.7 C
Udupi
Tuesday, May 12, 2026
spot_img
spot_img
HomeBlogಪ್ರಧಾನಿ ಹೇಳಿಕೆಗೆ ವಿರೋಧ, ಕಾಂಗ್ರೆಸ್ ನ ಮಾನಸಿಕ ಮತ್ತು ಭೌತಿಕ ದಿವಾಳಿತನಕ್ಕೆ ಸಾಕ್ಷಿ

ಪ್ರಧಾನಿ ಹೇಳಿಕೆಗೆ ವಿರೋಧ, ಕಾಂಗ್ರೆಸ್ ನ ಮಾನಸಿಕ ಮತ್ತು ಭೌತಿಕ ದಿವಾಳಿತನಕ್ಕೆ ಸಾಕ್ಷಿ

ದೇಶದ ಸಂಕಷ್ಟದ ಸಮಯದಲ್ಲೂ, ರಾಜಕೀಯ… ಬೇಜವಾಬ್ದಾರಿತನದ ಹೇಳಿಕೆ ಖಂಡನೀಯ: ರವೀಂದ್ರ ಮೊಯ್ಲಿ

ಮಧ್ಯ ಪ್ರಾಚ್ಯ ರಾಷ್ಟ್ರದಲ್ಲಿನ ಯುದ್ಧದ ಪರಿಣಾಮವಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡಿಸೇಲ್ ಬೆಲೆ ಏರಿಕೆ, ಮಾರುಕಟ್ಟೆಯಲ್ಲಿನ ಪೂರೈಕೆಯಲ್ಲಿ ವ್ಯತ್ಯಯ ಮತ್ತು ವಿತ್ತೀಯ ಕೊರತೆಯಿಂದಾಗಿ ಮುಂಬರುವ ದಿನಗಳಲ್ಲಿ ದೇಶದ ಆರ್ಥಿಕ ಸ್ಥಿತಿ ಸಂಕಷ್ಟಕ್ಕೊಳಗಾಗಬಹುದೆಂಬ ಮುನ್ನೆಚ್ಚರಿಕೆಯಿಂದ ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಜನ ಸಾಮಾನ್ಯರಲ್ಲಿ ಪೆಟ್ರೋಲ್, ಡಿಸೇಲ್ ಬಳಕೆಯನ್ನು ಕಡಿಮೆಗೊಳಿಸುವಂತೆ ಹಾಗೂ ಚಿನ್ನದ ಖರೀದಿಯನ್ನು ಮತ್ತು ರಸಗೊಬ್ಬರ ಆಮದು ಮಾಡುವುದನ್ನು ಮುಂದೂಡುವಂತೆ ವಿನಂತಿಸಿಕೊಂಡಿರುವುದನ್ನು ಕಾಂಗ್ರೇಸ್ ಪಕ್ಷ ವಿರೋಧಿಸುತ್ತಿರುವುದು ಅವರ ಮಾನಸಿಕತೆ ಮತ್ತು ಭೌತಿಕ ದಿವಾಳಿತನ ತೋರಿಸುತ್ತದೆ.

ಭಾರತ ಸೇರಿ ಹೆಚ್ಚಿನ ಏಷಿಯನ್ ರಾಷ್ಟ್ರಗಳು ತಮ್ಮ ಅಂತರಾಷ್ಟ್ರೀಯ ವಹಿವಾಟುಗಳನ್ನು ಡಾಲರ್ ಮೂಲಕ ಮಾಡುತ್ತಿದ್ದು, ವಾರ್ಷಿಕ ಆಮದು ರಫ್ತುಗಳ ಪ್ರಮಾಣದಲ್ಲಿ ವ್ಯತ್ಯಯವಾದರೆ ದೇಶದ ಆರ್ಥಿಕತೆಯ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ. ಕಳೆದ ವರ್ಷದಲ್ಲಿ ಭಾರತದ ಆಮದು ಮಾಡಿಕೊಂಡ ಸರಕುಗಳಲ್ಲಿ 121.07 ಬಿಲಿಯನ್ ಡಾಲರ್ ಖಚ್ಚಾ ತೈಲಗಳಿಗೆ, 72 ಬಿಲಿಯನ್ ಡಾಲರ್ ಚಿನ್ನ ಖರೀದಿಗೆ, 18.3 ಬಿಲಿಯನ್ ಡಾಲರ್ ಅಡುಗೆ ಎಣ್ಣೆ, 18 ಬಿಲಿಯನ್ ಡಾಲರ್ ರಸ ಗೊಬ್ಬರಗಳಿಗೆ ವಿನಿಯೋಗವಾಗಿದ್ದು, ಇದು ಅಮದಿನ ಒಟ್ಟು ಪ್ರಮಾಣ 30% ಆಗಿರುತ್ತದೆ. ಯುದ್ಧದಂತಹ ಸಂಧರ್ಭಗಳಲ್ಲಿ ಅಮದು ಮಾಡಿಕೊಳ್ಳುವ ಸರಕುಗಳ ಬೆಲೆಯು ಗಗನಕ್ಕೆರುವುದರಿಂದ ನಮ್ಮ ಬಳಕೆಯ ಪ್ರಮಾಣವನ್ನು ಅಗತ್ಯಕ್ಕೆ ಮಾತ್ರ ಸೀಮಿತಗೊಳಿಸಿದರೆ ಆಮದಿನ ಪ್ರಮಾಣ ಕಡಿಮೆಯಾಗಿ ಭಾರತದ ಆರ್ಥಿಕತೆಯ ಹೊರೆಯನ್ನು ಕಡಿಮೆ ಮಾಡುತ್ತದೆ. ಈ ಹಿಂದೆ ಭಾರತ ಮತ್ತು ಪಾಕಿಸ್ತಾನ ಯುದ್ಧದ ಸಂಧರ್ಭದಲ್ಲಿ ಗೋಧಿಯ ಆಮದಿನ ಮೇಲೆ ನಿರ್ಭಂಧ ಹೇರಿದಾಗ ಆಗಿನ ಜನತೆಗೆ ಆಗಿನ ಪ್ರಧಾನಿ ಶ್ರೀ ಲಾಲ್ ಬಹುದ್ದೂ‌ರ್ ಶಾಸ್ತ್ರೀಯವರು ಒಂದು ಹೊತ್ತಿನ ಊಟ ಬಿಡುವಂತೆ ಜನತೆಗೆ ಕರೆ ನೀಡಿದ್ದು, ಅದಕ್ಕೆ ರಾಷ್ಟ್ರ ವ್ಯಾಪಿ ಬೆಂಬಲ ವ್ಯಕ್ತವಾಗಿದನ್ನು ನಾವು ನೆನಪಿಸಬೇಕಾಗುತ್ತದೆ. ಕಾಂಗ್ರೇಸ್ ಪಕ್ಷದ ಹಿರಿಯ ನಾಯಕರದ ಮತ್ತು ಮಾಜಿ ಇಂಧನ ಮತ್ತು ಪೆಟ್ರೋಲಿಯಮ್ ಸಚಿವರಾದ ಡಾ. ಎಂ. ವೀರಪ್ಪ ಮೊಯ್ಲಿಯವರು ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ನಿಯಂತ್ರಣಕ್ಕಾಗಿ ರಾತ್ರಿ 8.00 ಗಂಟೆಗೆ ಪೆಟ್ರೋಲ್ ಪಂಪ್‌ಗಳನ್ನು ಮುಚ್ಚುವಂತೆ ಹಾಗೂ ಪೆಟ್ರೋಲಿಯಮ್ ಉತ್ಪನಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸುವಂತೆ ಸಲಹೆ ನೀಡಿರುವುದು ಹಾಗೂ ಮಾಜಿ ಕೇಂದ್ರ ಸಚಿವರುಗಳಾದ ಪಿ. ಚಿದಂಬರಂ ಹಾಗೂ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ರವರು ಕೂಡ ತೈಲೊತ್ಪನ್ನಗಳನ್ನು ಕಡಿಮೆ ಪ್ರಮಾಣದಲ್ಲಿ ಬಳಸುವಂತೆ ಕರೆ ನೀಡಿರುವುದನ್ನು ಕಾಂಗ್ರೇಸ್ ನಾಯಕರುಗಳು ಮರೆತಂತೆ ಕಾಣುತ್ತಿದೆ.

ದೇಶದ ಪ್ರಧಾನಿ ನರೇಂದ್ರ ಮೋದಿಯವರ ವಿದೇಶಿ ಪ್ರವಾಸದ ಬಗ್ಗೆ ಮಾತನಾಡುವ ಕಾಂಗ್ರೇಸಿಗರು ಅವರ ನಾಯಕರುಗಳಂತೆ ಪ್ರಧಾನಿಯವರು ಮೋಜು ಮಸ್ತಿಗಾಗಿ ವಿದೇಶ ಪ್ರವಾಸ ಮಾಡುತ್ತಿಲ್ಲ, ವಿಪಕ್ಷೀಯ ವ್ಯಾಪಾರ ವೃದ್ಧಿ ರಾಜತಾಂತ್ರಿಕ ಸಂಬಂಧ ವೃದ್ಧಿಗೊಳಿಸುವ ನಿಟ್ಟಿನಲ್ಲಿ ಪ್ರವಾಸ ಮಾಡುತ್ತಿದ್ದು, ದೇಶದ ಸಂಕಷ್ಟದ ಸಮಯದಲ್ಲಿ ದೇಶಕ್ಕಾಗಿ ದೇಶದೊಂದಿಗೆ ಇರಬೇಕೆ ಹೊರತು ಈಗಾಗಲೇ ಜನರಿಂದ ಅವಕೃಪೆಗೊಳಗಾಗಿರುವ ನೀವುಗಳು ಮತ್ತೆ ರಾಜಕೀಯ ತೆವಳಿಗಾಗಿ ಬೇಜವಬ್ದಾರಿತನದ ಹೇಳಿಕೆ ನೀಡಿ ನಗೆ ಪಾಟಲಿಗೀಡಾಗಬೇಡಿ ಎಂದು ಕಾರ್ಕಳ ಬಿಜೆಪಿ ವಕ್ತಾರರಾದ ರವೀಂದ್ರ ಮೊಯ್ಲಿ ತಿಳಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page