ಸಂಭ್ರಮದ 80ನೇ ಸ್ವಾತಂತ್ರ್ಯ ದಿನಾಚರಣೆ ಆಚರಣೆ

ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಕ್ಕುಂದೂರು ಇಲ್ಲಿ, 80ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಮುಂಜಾನೆಯ ಧ್ವಜಾರೋಹಣ ಕಾರ್ಯಕ್ರಮವನ್ನು ಶಾಲಾ ಹಿತೈಷಿ ಹಾಗೂ ಉದ್ಯಮಿ ರೋಟೋರಿಯನ್ ಚಂದ್ರಶೇಖರ್ ಹೆಗ್ಡೆಯವರು ನೆರವೇರಿಸಿ ದಿನ ವಿಶೇಷದ ಬಗ್ಗೆ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ನಂತರದ ಪುರ ಮೆರವಣಿಗೆ ಕಾರ್ಯಕ್ರಮಕ್ಕೆ ಕಮಲಾಕ್ಷ ಕಾಮತರ ಸುಪುತ್ರರಾದ ಪ್ರತಿಕ್ ಕಾಮತ್ ರವರು ನೆರವೇರಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಹಿತೈಷಿ ಹಾಗೂ ಇಲ್ಲಿ ಇಂಟರ್ ಶಿಪ್ ಸೇವೆಯನ್ನು ಸಲ್ಲಿಸಿರುವಂತಹ ಶ್ರೀಮತಿ ಪದ್ಮಶ್ರೀ ಪದ್ಮ ರಾಜ್ ರವರು ವಹಿಸಿಕೊಂಡರು.

ಮುಖ್ಯ ಅತಿಥಿಗಳಾಗಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ವೃಷಭ ರಾಜ ಕಾಡಂಬ, ಶಾಲಾ ಹಿತೈಷಿ ಪ್ರತಿಕ್ ಕಾಮತ್, ಶಾಲಾ ನಿವೃತ್ತಿ ಶಿಕ್ಷಕಿಯಾಗಿದ್ದ ಶ್ರೀಮತಿ N. ರತ್ನಾವತಿ ಹಾಗೂ ಗೀತಾ ಭಂಡಾರಿ ಹಾಗೂ ಮುಖ್ಯ ಶಿಕ್ಷಕರಾದ ಜಗದೀಶ್ ಹೆಗಡೆಯವರು ಉಪಸ್ಥಿತರಿದ್ದರು. ಇವರೆಲ್ಲರನ್ನೂ ಮುಖ್ಯ ಶಿಕ್ಷಕರು ಸ್ವಾಗತಿಸಿದರು. ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆ ಹಾಗೂ ಭಾಷಣ ಕಾರ್ಯಕ್ರಮ ನಡೆಯಿತು. ವಿಜೇತ ಮಕ್ಕಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಶಿಕ್ಷಕಿ ರುಮೈಝಾ ರವರು ನಡೆಸಿಕೊಟ್ಟರು . ಈ ಸಂದರ್ಭದಲ್ಲಿ ನಿವೃತ್ತ ಮುಖ್ಯ ಶಿಕ್ಷಕಿ ಯಮುನಾ ಎಲ್ ಇವರ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಎಲ್ಲಾ ಶಿಕ್ಷಕ ಶಿಕ್ಷಕಿಯರಿಗೆ ಉಡುಗೊರೆಯನ್ನು ನೀಡಲಾಯಿತು. ಯಮುನ ಟೀಚರ್ ರವರಿಗೆ ಶಾಲೆಗೆ ಬರಲು ಅನಾನುಕೂಲವಾದ ಕಾರಣ ಶ್ರೀಮತಿ ಅನಿತಾ, ರುಮೈಝಾ ರವರು ಮುಖ್ಯ ಶಿಕ್ಷಕರ ಜೊತೆಗೆ ಅವರ ಮನೆಗೆ ಹೋಗಿ ಉಡುಗೊರೆಯನ್ನು ನೀಡಿ ಹುಟ್ಟು ಹಬ್ಬದ ಶುಭಾಶಯಗಳು ಕೋರಲಾಯಿತು. ಗ್ರಾಮ ಪಂಚಾಯತ್ ಕುಕ್ಕುಂದೂರು, ಕಮಲಾಕ್ಷ ಕಾಮತ್, ಯಮುನಾ ಎಲ್, N. ರತ್ನಾವತಿ, ವೃಷಭ ರಾಜ ಕಡಂಬ, ಪದ್ಮಶ್ರೀ ಪದ್ಮರಾಜ್, ಸತೀಶ್ ಕಾಮತ್ ನೀಡಿದ ತಿಂಡಿಯನ್ನು ವಿತರಿಸಲಾಯಿತು. ಬೆಳಗ್ಗಿನ ಮಕ್ಕಳ ಉಪಹಾರ ಮತ್ತು ಬಹುಮಾನ ಪ್ರಯೋಜಕತ್ವವನ್ನು ಮುಖ್ಯ ಶಿಕ್ಷಕರು ವಹಿಸಿಕೊಂಡಿದ್ದರು. ಅಂಗನವಾಡಿ ಶಿಕ್ಷಕರು ಹಾಗೂ ಹಳೆ ವಿದ್ಯಾರ್ಥಿಗಳು ಪೋಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶಿಕ್ಷಕಿ ವೀಣಾ ರವರು ಧನ್ಯವಾದಗಳುವಿತ್ತರು. ಶ್ರೀಮತಿ ವಿದ್ಯಾ ರವರು ಕಾರ್ಯಕ್ರಮ ಸಂಯೋಜನೆ ಮಾಡಿದರು.














































































































