
ಕಾರ್ಕಳ: ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ,
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಕಾರ್ಕಳ ಹಾಗೂ
ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆ, ಕಾರ್ಕಳ ಇವರ
ಜಂಟಿ ಆಶ್ರಯದಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ
ಪ್ರೌಢಶಾಲಾ ಬಾಲಕರ ವಿಭಾಗದ 17ರ ವಯೋಮಿತಿಯ
ಕ್ರಿಕೆಟ್ ಪಂದ್ಯಾಟದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್
ಆAಗ್ಲಮಾಧ್ಯಮ ಪ್ರೌಢಶಾಲೆಯು ಪ್ರಥಮ ಸ್ಥಾನ
ಪಡೆದುಕೊಂಡು ಜಿಲ್ಲಾಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿದೆ.
ಒಂಬತ್ತನೇ ತರಗತಿಯ ವಿನೀತ್ ಪೂಜಾರಿ, ದಕ್ಷ್ ಶೆಟ್ಟಿ, ಕೌಶಿಕ್
ಶೆಟ್ಟಿ, ಏಕಾಂಶ್ ಕೋಟ್ಯಾನ್, ತನ್ಮಯ್ ಶೆಟ್ಟಿ, ರಿಶಾನ್
ಫೆರ್ನಾಂಡಿಸ್, ಶೇಕ್ ಬಿಲಾಲ್, ಶೇಕ್ ಅರ್ಝೆನ್, ಸಾತ್ವಿಕ್ ಶೆಣೈ,
ಸೌರಭ್ ಹಾಗೂ ಅಂಕುಶ್ ತಂಡ ಪ್ರತಿನಿಧಿಸಿದ್ದು ಜಿಲ್ಲಾಮಟ್ಟಕ್ಕೆ
ಆಯ್ಕೆಯಾದ ವಿದ್ಯಾರ್ಥಿಗಳಾಗಿದ್ದಾರೆ.























































































