
ಆಜೆಕಾರು–ವರಂಗ ಜೈನ್ ಮಿಲನ್ ಆಗಸ್ಟ್ ತಿಂಗಳ ಮಾಸಿಕ ಸಭೆ
ಆಜೆಕಾರು–ವರಂಗ ಜೈನ್ ಮಿಲನ್ನ ಆಗಸ್ಟ್ ತಿಂಗಳ ಮಾಸಿಕ ಸಭೆಯು 22.08.2026ರಂದು ಸನತ್ ಕುಮಾರ್ ಜೈನ್ ಅವರ ಆತಿಥ್ಯದಲ್ಲಿ ಹಿರ್ಗಾನದ ಅವರ ಸ್ವಗೃಹ “ಪ್ರಭ ನಿವಾಸ” ದಲ್ಲಿ ಯಶಸ್ವಿಯಾಗಿ ನೆರವೇರಿತು.
ಮಿಲನ್ನ ಅಧ್ಯಕ್ಷರಾದ ವೀರ್ ಪ್ರಸನ್ನ ಕುಮಾರ್ ಅವರು ಅಧ್ಯಕ್ಷೀಯ ಭಾಷಣದಲ್ಲಿ ಮಾತನಾಡಿ, ಜೈನ್ ಮಿಲನ್ನ ಮಾಸಿಕ ಸಭೆಗಳು ಪ್ರತಿ ಸದಸ್ಯರ ಮನೆಯಲ್ಲಿ ನಡೆಯುವುದರಿಂದ ಪರಸ್ಪರ ಪರಿಚಯ, ಬಾಂಧವ್ಯ ಹಾಗೂ ಕುಟುಂಬಗಳ ಸ್ಥಿತಿಗತಿಗಳನ್ನು ಅರಿತುಕೊಂಡು, ಅಗತ್ಯವಿರುವ ಸಂದರ್ಭದಲ್ಲಿ ಪರಸ್ಪರ ಸ್ಪಂದಿಸಲು ಹಾಗೂ ಸಹಕಾರ ನೀಡಲು ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆಜೆಕಾರು ವೀರ್ ಪ್ರಸನ್ನ ಕುಮಾರ್ ಇಂದ್ರರು ಮಾತನಾಡಿ, “ದಾನ, ಧರ್ಮ ಹಾಗೂ ಸಂಕಷ್ಟದಲ್ಲಿರುವವರಿಗೆ ಕೈಲಾದ ಸಹಾಯ ಮಾಡುವುದು ಜೈನ ಧರ್ಮದ ಪ್ರಮುಖ ತತ್ವಗಳಲ್ಲಿ ಒಂದಾಗಿದೆ. ಕಷ್ಟದಲ್ಲಿರುವವರಿಗೆ ನೆರವಾಗುವುದು ಪುಣ್ಯದ ಕಾರ್ಯ. ನಾವು ಬೆಳೆಯುವುದರ ಜೊತೆಗೆ ಇತರರನ್ನೂ ಬೆಳೆಸೋಣ” ಎಂಬ ಸಂದೇಶ ನೀಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಚಂದ್ರಪ್ರಭ ಮಾಳ, ಸನತ್ ಕುಮಾರ್ ಜೈನ್ ಹಾಗೂ ಜಯವರ್ಮ ಜೈನ್ ಉಪಸ್ಥಿತರಿದ್ದರು.
ವೀರಾಂಗನಾ ಸವಿತಾ ಅನಂತರಾಜ ಇಂದ್ರರು ಪ್ರಾರ್ಥನೆ ನೆರವೇರಿಸಿದರು. ವೀರಾಂಗನಾ ಪ್ರೇಮ ವಿ. ಸೂರಿಗ ಅವರು ಜುಲೈ ತಿಂಗಳ ವರದಿಯನ್ನು ವಾಚಿಸಿದರು. ಪುಷ್ಪಾಂಜಲಿ ಗುಣಪಾಲ್ ಜೈನ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. ಮಿಲನ್ನ ಕಾರ್ಯದರ್ಶಿ ಸಂತೋಷ್ ಜೈನ್ ಅವರು ವಂದನಾರ್ಪಣೆ ಸಲ್ಲಿಸಿದರು.
ಪರಸ್ಪರ ಬಾಂಧವ್ಯ, ಸಹಕಾರ ಮತ್ತು ಜೈನ ಧರ್ಮದ ಮೌಲ್ಯಗಳನ್ನು ಸಾರಿದ ಈ ಮಾಸಿಕ ಸಭೆಯು ಅರ್ಥಪೂರ್ಣವಾಗಿ ನೆರವೇರಿತು.





















































































