
ಕಾರ್ಕಳ: ಶ್ರೀ ಜೈನಧರ್ಮ ಜೀರ್ಣೋದ್ದಾರಕ ಸಂಘದ ವತಿಯಿಂದ ಶ್ರೀ ಗೋಮಟೇಶ್ವರ ಬೆಟ್ಟದ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ರಥಯಾತ್ರಾ ಮಹೋತ್ಸವವು ಫೆ.12ರಂದು ರಾತ್ರಿ 8.30 ಗಂಟೆಗೆ ನೆರವೇರಲಿದೆ.
ದಾನಶಾಲೆ ಶ್ರೀ ಜೈನಮಠದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು ದಿವ್ಯ ಉಪಸ್ಥಿತರಿದ್ದು, ಆಶೀರ್ವಚನ ನೀಡುವರು. ಮುಖ್ಯ ಅತಿಥಿಯಾಗಿ ಮಂಗಳೂರು ವಿ.ವಿ.ಉಪಕುಲಪತಿ ಪ್ರೊ.ಪಿ.ಎಲ್.ಧರ್ಮ ಉಪಸ್ಥಿತರಿರುವರು.
ಫೆ.12ರಂದು ಬೆಳಗ್ಗೆ 10 ಗಂಟೆಗೆ 108 ಕಲಶಗಳಿಂದ ಪಾದಾಭಿಷೇಕ, ಮಧ್ಯಾಹ್ನ ಸಂಘ ಸಂತರ್ಪಣೆ, ಸಂಜೆ 7 ಗಂಟೆಗೆ ಶ್ರೀ ಜೈನ ಮಠದಿಂದ ಅಗ್ರೋದಕ ಮೆರವಣಿಗೆ ರಾತ್ರಿ 7.30ರಿಂದ ಜಿನಭಕ್ತಿ ಗೀತೆಗಳು, 8.30ಕ್ಕೆ ಧಾರ್ಮಿಕ ಸಭೆ, 9.30ಕ್ಕೆ ರಥಯಾತ್ರಾ ಮಹೋತ್ಸವ ನೆರವೇರಲಿದೆ.





















