ಅಧ್ಯಕ್ಷರಾಗಿ ಸಂಧ್ಯಾ ಕಾಮತ್, ಕಾರ್ಯದರ್ಶಿಯಾಗಿ ಪ್ರಜ್ಞಾ ಪೈ

ಕಾರ್ಕಳ: 2025-26 ಜಿ.ಎಸ್.ಬಿ ಮಹಿಳಾ ವಿಭಾಗದ ವಾರ್ಷಿಕೋತ್ಸವವು 2025 ಫೆ.1ರಂದು ಕಾರ್ಕಳ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಹೊಸ ಸಮಿತಿ ರಚಿಸಲಾಯಿತು.
ಅಧ್ಯಕ್ಷರು: ಸಂಧ್ಯಾ ಕಾಮತ್
ಉಪಾಧ್ಯಕ್ಷೆ: ರೇಷ್ಮಾ ಶೆಣೈ
ಕಾರ್ಯದರ್ಶಿ: ಪ್ರಜ್ಞಾ ಪೈ
ಜಂಟಿ ಕಾರ್ಯದರ್ಶಿ: ಶ್ವೇತಾ ಶೆಣೈ
ಕೋಶಾಧಿಕಾರಿ: ವಾರಿಜಾ ವಿ ಕಾಮತ್
ಪದಾಧಿಕಾರಿ ಸದಸ್ಯರು:ಆರತಿ ಪೈ, ಮಮತಾ ಶೆಣೈ , ಪ್ರಭಾ ನಾಯಕ್, ರಾಖಿ ಭಟ್, ವಸುಂದರಾ ಕಾಮತ್, ಲಲಿತಾ ಭಟ್ ಹಾಗೂ ಪಲ್ಲವಿ ಪೈ
ಫೆ. 1 ಶನಿವಾರ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಕಳ ಜಿ.ಎಸ್.ಬಿ ಮಹಿಳಾ ವಿಭಾಗದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಶಿಕ್ಷಕಿ ಪಿ.ಎಚ್.ಡಿ ಪದವಿ ಪಡೆದ ಡಾ. ಕೀರ್ತಿ ತಂತ್ರಿ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದರು .ದೇವರ ಅನುಗ್ರಹ ಹಾಗೂ ಹಿರಿಯರ ಆಶೀರ್ವಾದ ಹಾಗೂ ಗೆಳತಿಯರ ಪ್ರೀತಿ ಇದ್ದಲ್ಲಿ ಅದೇ ದೊಡ್ಡ ಭಾಗ್ಯ.ಮಹಿಳೆಯರು ಚಿಂತೆಯನ್ನು ಬಿಟ್ಟು ಸಕಾರಾತ್ಮವಾಗಿ ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಬೇಕು ಎಂದು ಉತ್ತೇಜನದ ಮಾತನ್ನು ಹೇಳಿದರು.
ದಿವ್ಯಾ ಡಿ ಪೈಯವರು ಅಧ್ಯಕ್ಷತೆ ವಹಿಸಿದ್ದರು.4 ಹೆಣ್ಣುಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.
- ಏಷ್ಯಾ ಫೆಸಿಫಿಕ್ ಲೀಡರ್ಶಿಪ್ ಅಂತರಾಷ್ಟ್ರೀಯ ಪ್ರಶಸ್ತಿ ಪಡೆದ ಶ್ರೀಮತಿ ಜ್ಯೋತಿ ಜೆ ಪೈ
- ಎಂಬಿಬಿಎಸ್ ರ್ಯಾಂಕ್ ಪಡೆದ ಕು.ಡಾ.ಮಹಲಸಾ ನಾಯಕ್
- ಎಂಬಿಬಿಎಸ್ ರ್ಯಾಂಕ್ ಪಡೆದ ಕು.ಡಾ.ಮಟ್ಟಿ ನಮ್ರತಾ ಪ್ರಭು
- ಎಸ್ ಎಸ್ ಎಲ್ ಸಿ ಟಾಪರ್ ಕು.ಅಮೃತಾ ಕಾಮತ್
- ಬಿಕಾಂ ರ್ಯಾಂಕ್ ಹೋಲ್ಡರ್ ಕು.ತೃಪ್ತಿ ನಾಯಕ್
- ಭರತನಾಟ್ಯ ವಿದ್ವತ್ ಮಾಡಿದ ಕು.ಲಕ್ಷ್ಮೀ ಪ್ರಭು
7.ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶ್ರೀಮತಿ ಆರತಿ ಪೈ
7ಸಾಧಕರಿಗೆ ಸನ್ಮಾನ ಮಾಡಲಾಯಿತು.
ವಾರ್ಷಿಕೋತ್ಸವದ ಅಂಗವಾಗಿ ನಡೆಸಿದ ವಿವಿಧ ಆಟೋಟ ಸ್ಪರ್ಧೆ ಹಾಗೂ ಛಧ್ಮವೇಷ ಸ್ಪರ್ಧಾ ವಿಜೇತರಿಗೆ ಬಹುಮಾನ ನೀಡಲಾಯಿತು. ರೇಷ್ಮಾ ಶೆಣೈರವರು ಪ್ರಾರ್ಥನೆ ಹಾಡಿದರು.. .ಉಪಾಧ್ಯಕ್ಷೆ ಶ್ವೇತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು.ಕೋಶಾಧಿಕಾರಿ ಮಮತಾ ಶೆಣೈರವರು ಆಯವ್ಯಯ ಓದಿ ಹೇಳಿದರು.ವಾರಿಜಾ ವಿ ಕಾಮತ್ ವಂದಿಸಿದರು.
ಸಭಾಕಾರ್ಯಕ್ರಮ ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.





















