21.1 C
Udupi
Tuesday, February 17, 2026
spot_img
spot_img
HomeBlog16 ಕಂತು ಪೂರೈಸಿದ ಕಿಸಾನ್ ಸಮ್ಮಾನ್: 17ನೇ ಕಂತಿನ ನಿರೀಕ್ಷೆಯಲ್ಲಿ ರೈತರು

16 ಕಂತು ಪೂರೈಸಿದ ಕಿಸಾನ್ ಸಮ್ಮಾನ್: 17ನೇ ಕಂತಿನ ನಿರೀಕ್ಷೆಯಲ್ಲಿ ರೈತರು

spot_imgspot_img

ನವದೆಹಲಿ: 2019ರಲ್ಲಿ ರೈತರಿಗೆ ವ್ಯವಸಾಯಕ್ಕೆ ಸಹಾಯವಾಗಲು ಕೇಂದ್ರ ಸರ್ಕಾರದಿಂದ ರೂಪಿಸಲಾಗಿರುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಅಡಿ ಸರ್ಕಾರ 2,000 ರೂ ಹಣವನ್ನು ಪ್ರತೀ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸುತ್ತಾ ಬಂದಿದ್ದು ಈವರೆಗೆ 16 ಕಂತುಗಳ ಹಣವನ್ನು ಯಶಸ್ವಿಯಾಗಿ ಬಿಡುಗಡೆ ಮಾಡಿದೆ.

ಇದೀಗ ರೈತರು 17ನೇ ಕಂತಿನ ಹಣದ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. 16ನೇ ಕಂತಿನ ಹಣವನ್ನು ಸರ್ಕಾರ 2024ರ ಫೆಬ್ರುವರಿ 28ರಂದು ಬಿಡುಗಡೆ ಮಾಡಿದ್ದು 9 ಕೋಟಿಗೂ ಹೆಚ್ಚು ರೈತರ ಖಾತೆಗಳಿಗೆ ಒಟ್ಟು 21,000 ಕೋಟಿ ರೂನಷ್ಟು ಹಣವನ್ನು ಸರ್ಕಾರ ವರ್ಗಾಯಿಸಿತ್ತು.ವರ್ಷಕ್ಕೆ ಮೂರು ಕಂತುಗಳಂತೆ ನಾಲ್ಕು ತಿಂಗಳಿಗೊಮ್ಮೆ 2,000 ರೂ ನೀಡಲಾಗುತ್ತದೆ. ಫೆಬ್ರವರಿ ತಿಂಗಳಿನಲ್ಲಿ 16ನೇ ಕಂತು ಬಿಡುಗಡೆ ಮಾಡಿದ್ದು 17 ನೆಯ ಕಂತು ಮೇ ಅಥವಾ ಜೂನ್ ತಿಂಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಇಕೆವೈಸಿ ಅಪ್ಡೇಟ್ ಮಾಡುವುದು ಕಡ್ಡಾಯವಾಗಿದ್ದು ಒಂದು ವೇಳೆ ಇಕೆವೈಸಿ ಮಾಡಿರದಿದ್ದರೆ ಕಳೆದ ಮೂರು ನಾಲ್ಕು ಕಂತುಗಳ ಹಣ ಬಾರದಿರುವುದಕ್ಕೆ ಇದೇ ಕಾರಣವಾಗಿದೆ.

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page