ಭಜನಾ ಮಂಡಳಿಗಳ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಭಜನಾ ಕಮ್ಮಟ
ದಿ,11.8.2024 ನೇ, ಆದಿತ್ಯವಾರ ಬಾಹುಬಲಿ ಪ್ರವಚನ ಮಂದಿರ, ಕಾರ್ಕಳ

ಕಾರ್ಕಳ:ಜನಾ ಮಂಡಳಿಗಳ ಒಕ್ಕೂಟ ಕಾರ್ಕಳ ತಾಲೂಕು ನೇತೃತ್ವದಲ್ಲಿ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಕಾರ್ಕಳ ಇವರ ಸಹಕಾರದೊಂದಿಗೆ, ಉಡುಪಿ ಜಿಲ್ಲಾ ಭಜನಾ ಮಂಡಳಿಗಳ ಒಕ್ಕೂಟದ ಗೌರವಾಧ್ಯಕ್ಷರಾದ ನಾಡೋಜ ಡಾ. ಜಿ.ಶಂಕರ್ ಇವರ ಮಾರ್ಗದರ್ಶನದೊಂದಿಗೆ
ಭಜನಾ ಮಂಡಳಿಗಳ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಭಜನಾ ಕಮ್ಮಟದಿ,11.8.2024 ನೇ, ಆದಿತ್ಯವಾರ ಬಾಹುಬಲಿ ಪ್ರವಚನ ಮಂದಿರ, ಕಾರ್ಕಳ ಇಲ್ಲಿ ನಡೆಯಲಿದೆ.

ಬೆಳಿಗ್ಗೆ 9 ಗಂಟೆಯಿಂದ ನಗರ ಭಜನಾ ದರ್ಶನ (ಕಾರ್ಕಳ ಮಾರಿಗುಡಿಯಿಂದ ಬಾಹುಬಲಿ ಪ್ರವಚನ ಮಂದಿರದ ವರೆಗೆ ಭಜನಾ ಮೆರವಣಿಗೆ), ಬೆಳಿಗ್ಗೆ 10 ಗಂಟೆಯಿಂದ ಸಭಾ ಕಾರ್ಯಕ್ರಮ 11 ಗಂಟೆಯಿಂದ ಯೋಗೀಶ್ ಕಿಣಿ ಇವರಿಂದ ಭಜನ ಗಾಯನ ತರಬೇತಿ ಭಜನಾ ಕಮ್ಮಟ, ಒಂದು ಗಂಟೆಗೆ ಭೋಜನ ನಡೆಯಲಿದ್ದು, ಮಧ್ಯಾಹ್ನ 2 ಗಂಟೆಯಿಂದ ರಮೇಶ್ ಕಲ್ಮಾಡಿ ಇವರ ಮಾರ್ಗದರ್ಶನದಲ್ಲಿ ಕುಣಿತ ಭಜನೆ ತರಬೇತಿ, ಮಧ್ಯಾಹ್ನ 3:30 ರಿಂದ ಸಮಾರೋಪ ಸಮಾರಂಭ ನಡೆಯಲಿದೆ.













