
ಹೊಸದಿಲ್ಲಿ: ಅಕ್ಟೋಬರ್ 6 ಭಾನುವಾರದಂದು ‘ಜನತಾ ಕಿ ಅದಾಲತ್’ ನಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ದೆಹಲಿ ವಿಧಾನಸಭೆ ಚುನಾವಣೆಗೂ ಮುನ್ನ ಎನ್ಡಿಎ ಆಡಳಿತವಿರುವ ರಾಜ್ಯಗಳಲ್ಲಿ ಉಚಿತ ವಿದ್ಯುತ್ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸವಾಲು ಹಾಕಿದ್ದು, ಈ ಬೇಡಿಕೆ ಈಡೇರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಘೋಷಿಸಿದ್ದಾರೆ.
ಬಿಜೆಪಿಯ “ಡಬಲ್ ಇಂಜಿನ್” ಸರಕಾರಗಳು ರಾಜ್ಯಾದ್ಯಂತ ವಿಫಲವಾಗಿವೆ. ಹರಿಯಾಣ ಮತ್ತು ಜಮ್ಮು ಮತ್ತು ಕಾಶ್ಮೀರದಿಂದ ಬಿಜೆಪಿಯನ್ನು ಹೊರಹಾಕುವ ಮುನ್ಸೂಚನೆ ಸಿಕ್ಕಿದೆ. ದೆಹಲಿಯಲ್ಲಿ ಪ್ರಜಾಪ್ರಭುತ್ವ ಇಲ್ಲ. ಇದು ಎಲ್ಜಿ ಆಡಳಿತದಲ್ಲಿದೆ ಎಂದ ಮಾಜಿ ಸಿಎಂ ಬಸ್ ಮಾರ್ಷಲ್ಗಳು ಮತ್ತು ಡಾಟಾ ಎಂಟ್ರಿ ಆಪರೇಟರ್ಗಳನ್ನು ತೆಗೆದುಹಾಕುವುದರ ಜತೆಗೆ ದೆಹಲಿಯಲ್ಲಿ ಗೃಹರಕ್ಷಕರ ವೇತನವನ್ನು ಸ್ಥಗಿತಗೊಳಿಸಿರುವುದನ್ನು ಉಲ್ಲೇಖಿಸಿ ಬಿಜೆಪಿ ಬಡವರ ವಿರೋಧಿ ಎಂದು ಆರೋಪಿಸಿದರು.













