
ಉಡುಪಿ: ಉಡುಪಿಯ ಬಡಗ ಬಿಟ್ಟು ಗ್ರಾಮದ ನವಗ್ರಹ ಕಾಲೋನಿಯಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು ಆ ಸಂದರ್ಭದಲ್ಲಿ ನೇಣು ಕುಣಿಕೆ ತುಂಡಾಗಿ ಬಿದ್ದು ಸಾವನಪ್ಪಿದ ಘಟನೆ ಇಂದು ವರದಿಯಾಗಿದೆ.
ಮೇಲ್ರಾಯ್ (55) ಎಂಬ ವ್ಯಕ್ತಿ ಮನೆಯ ಮೊದಲ ಅಂತಸ್ತಿನ ಮೇಲ್ಚಾವಣಿಯ ಕಬ್ಬಿಣದ ಅಡ್ಡ ಪಟ್ಟಿಗೆ ನೇಣು ಬಿಗಿದ ಸಂದರ್ಭ ನೀನು ಕುಣಿಕೆಯಲ್ಲಿ ನರಲಾಡುತ್ತಿದ್ದಾಗ ದೇಹದ ಭಾರದ ಕಾರಣ ಹಗ್ಗ ತುಂಡಾಗಿದ್ದು 20 ಅಡಿಗಿಂತಲೂ ಅಧಿಕ ಎತ್ತರದಿಂದ ಬಿದ್ದ ಕಾರಣ ತಲೆಗೆ ಗಂಭೀರ ಗಾಯವಾಗಿದ್ದು ವ್ಯಕ್ತಿ ಸ್ಥಳದಲ್ಲಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.



















