
ಕಾರ್ಕಳ: ಧ್ಯಾನವು ಮಕ್ಕಳಲ್ಲಿ ಏಕಾಗ್ರತೆಯನ್ನು ಮೂಡಿಸುವುದರ ಜೊತೆಗೆ ಮಕ್ಕಳಲ್ಲಿ ಭಯ,ಒತ್ತಡ ನಕಾರಾತ್ಮಕತೆಯನ್ನು ನಿವಾರಿಸುತ್ತದೆ.ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಬಾಲಮಂದಿರದಿಂದ ಪ್ರೌಢಶಾಲಾ ಮಕ್ಕಳಿಗೆ ಪ್ರತಿನಿತ್ಯ ಧ್ಯಾನ ಕಾರ್ಯಕ್ರಮವು ಮುಂಜಾನೆ ಪಠ್ಯ ಚಟುವಟಿಕೆಗಿಂತ ಮೊದಲು ನಡೆಯುತ್ತಿದೆ.ಇದರಿಂದ ಮಕ್ಕಳಲ್ಲಿ ಕಲಿಕಾ ಆಸಕ್ತಿ ಹಾಗೂ ಕಲಿಕಾ ಸಾಮರ್ಥ್ಯ ಹೆಚ್ಚಿಸುವುದಕ್ಕೆ ಈ ಧ್ಯಾನವು ಪೂರಕವಾಗಿದೆ.




















