
ನವದೆಹಲಿ: ಮಹಾರಾಷ್ಟ್ರದ ಪುಣೆಯ ದಂಪತಿ ವಿಚ್ಛೇದನ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ “ಮಹಿಳೆಯರನ್ನು ಕೌಟುಂಬಿಕ ದೌರ್ಜನ್ಯಗಳಿಂದ ರಕ್ಷಿಸಲು ಮತ್ತು ಅವರಿಗೆ ನೆರವಾಗಲು ಕಠಿಣ ಕಾನೂನುಗಳನ್ನು ರಚಿಸಲಾಗಿದೆಯೇ ಹೊರತು, ಅದನ್ನು ಪತಿಯ ವಿರುದ್ಧ ದುರ್ಬಳಕೆ ಮಾಡಲು ಅಲ್ಲ.’ ಎಂದು ಅಭಿಪ್ರಾಯ ವ್ಯಕ್ತಪಡಿಸಿ ಪತಿ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಕೇಸನ್ನು ವಜಾಗೊಳಿಸಿದೆ.
ವಿಚ್ಛೇದಿತ ಪತ್ನಿಯು ಪತಿಯ ಆಸ್ತಿ ಆಧಾರದಲ್ಲಿ ಪರಿಹಾರ ಕೇಳುವಂತಿಲ್ಲ. ಜೀವನಾಂಶವು ಪತ್ನಿ ಜೀವನಕ್ಕೆ ಆಧಾರ. ಅದು ಸುಲಿಗೆಯ ಮಾರ್ಗ ಆಗಬಾರದು. ಹೀಗಾಗಿ, ಮಹಿಳೆಯರು ಕಾಯ್ದೆ ಮೂಲಕ ಪರಿಹಾರ ಕಂಡುಕೊಳ್ಳುವಾಗ ಎಚ್ಚರಿಕೆ ವಹಿಸಬೇಕು. ಹಿಂದೂ ಧರ್ಮ ದಲ್ಲಿ ಮದುವೆಗೆ ವಿಶೇಷ ಮಾನ್ಯತೆಯಿದ್ದು, ಅದು ವ್ಯಾಪಾರವಾಗಬಾರದು ಎಂದು ಪೀಠ ತಿಳಿಸಿದೆ.
ಮಹಾರಾಷ್ಟ್ರದ ಪುಣೆ ಪ್ರಕರಣದಲ್ಲಿ ಪತ್ನಿಗೆ ಒಂದೇ ಕಂತಿನಲ್ಲಿ 12 ಕೋಟಿ ರೂ. ನೀಡಬೇಕೆಂದು ಸ್ಥಳೀಯ ಕೋರ್ಟ್ ಆದೇಶಿಸಿದ್ದು ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.