
ಪುರಾತನವಾದ ಬೋಳ ವರ್ಧಮಾನ ಸ್ವಾಮಿ ಬಸದಿಯ ಆಡಳಿತಗಾರರಾದ ಪ್ರವೀಣ್ ಕುಮಾರ್ ಅಗರಿ, ಸತೀಶ್ ಅಗರಿ ಮತ್ತು ಶ್ರೀಮತಿ ನಿಧಿ ಮಿಥುನ್ ಅವರು ತಮ್ಮ ಕುಟುಂಬದ ಆಡಳಿತಲ್ಲಿ ಇರುವ ಬೋಳ ವರ್ಧಮಾನ ಬಸದಿಯ ಜೀರ್ಣೋದ್ಧಾರ ಕೆಲಸಕ್ಕೆ ಅಡ್ಡಿ ಮಾಡುತ್ತಿದ್ದ ಮತ್ತು ಬಸದಿಯ ಜೀರ್ಣೋದ್ಧಾರಕ್ಕೆಂದು ಹೇಳಿ ಅನದಿಕೃತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ ಗಳನ್ನು ಅಳವಡಿಸಿ ಧನ ಕೇಳುತ್ತಿದ್ದ ಬಸದಿಯ ಅರ್ಚಕ ವರ್ಧಮಾನ ಇಂದ್ರ ಮತ್ತು ಅವರ ಮಗ ಮಹಾವೀರ ಇಂದ್ರ ಇವರ ವಿರುದ್ಧ ಕಾರ್ಕಳದ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಕೇಸು ದಾಖಲಾಗಿದ್ದು, ಇದೀಗ ಕಾರ್ಕಳದ ಹಿರಿಯ ನ್ಯಾಯಾಲಯವು ವರ್ಧಮಾನ ಇಂದ್ರ ಮತ್ತು ಅವರ ಮಗ ಮಹಾವೀರ ಇಂದ್ರ ಬಸದಿಯ ನಿರ್ವಹಣೆ, ಆಡಳಿತ ಮತ್ತು ಜೀರ್ಣೋಧಾರದ ಕಾರ್ಯಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಪಡಿಸುವುದನ್ನು ಅಥವಾ ಮಧ್ಯಪ್ರವೇಶಿಸುವುದನ್ನು ನಿರ್ಬಂಧಿಸಿ ತಡೆಯಾಜ್ಞೆ ನೀಡಿದೆ. ಮತ್ತು ಈ ಮೂಲಕ ಕ್ಲೈಮ್ ಮಾಡುವ ಎಲ್ಲಾ ವ್ಯಕ್ತಿಗಳು ಹಾಗೂ ಬ್ಯಾನರ್ಗಳು ಅಥವಾ ಇತರ ಮಾಧ್ಯಮಗಳಲ್ಲಿ ಬೋಳ ಶ್ರೀ ವರ್ಧಮಾನಸ್ವಾಮಿಯ ಬಸದಿಯ ಹೆಸರಿನಲ್ಲಿ ಅಥವಾ ಅದರ ನವೀಕರಣಕ್ಕಾಗಿ ಹಣವನ್ನು ಸಂಗ್ರಹಿಸುವುದನ್ನು ಅಥವಾ ಕೋರುವುದನ್ನು ನಿರ್ಬಂಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.













