
ಬೆಂಗಳೂರು: ಸೋಮವಾರ ಪ್ರಜ್ವಲ್ ರೇವಣ್ಣ ಅವರ ಎಸ್ಐಟಿ ಕಸ್ಟಡಿ ಅಂತ್ಯಗೊಂಡಿದ್ದು ಇತ್ತ ಕೇಂದ್ರದಲ್ಲಿ ಮಂಡ್ಯ ಸಂಸದ ಎಚ್ಡಿ ಕುಮಾರಸ್ವಾಮಿ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಸಚಿವಾಲಯದ ಮಂತ್ರಿಯಾದ ದಿನವೇ ಅಣ್ಣನ ಮಗ ಪ್ರಜ್ವಲ್ ರೇವಣ್ಣ 14 ದಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧನಕ್ಕೆ ಒಳಗಾಗಿ ಜೈಲಿನ ಅಧಿಕಾರಿಗಳು ಅವರಿಗೆ ಕೈದಿ ನಂಬರ್ಅನ್ನೂ ನೀಡಿದ್ದಾರೆ.
ಜೈಲಿನ ಕ್ವಾರಂಟೈನ್ ಸೆಂಟರ್ ನಲ್ಲಿರುವ ಪ್ರಜ್ವಲ್ ರೇವಣ್ಣ ಈಗ ವಿಚಾರಣಾಧೀನ ಕೈದಿ ಆಗಿದ್ದು ಈತನಿಗೆ ಪರಪ್ಪನ ಅಗ್ರಹಾರ ಜೈಲಿನ ವಿಚಾರಣಾದೀನ ಆರೋಪಿ ಸಂಖ್ಯೆ ನಂಬರ್ 5664 ಅನ್ನು ನೀಡಲಾಗಿದೆ. ನಾಲ್ಕುವರೆ ಗಂಟೆಗೆ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿರುವ ಹಿನ್ನಲೆಯಲ್ಲಿ ಪ್ರಜ್ವಲ್ ರೇವಣ್ಣಗೆ ಕೈದಿ ನಂಬರ್ ನೀಡಲಾಗಿದೆ.