
ಕಾರ್ಕಳ: ವಿದ್ಯಾರ್ಥಿಗಳಲ್ಲಿ ಹೈನುಗಾರಿಕೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಹಾಗೂ ಹಿರಿಯರ ಬಗ್ಗೆ ಗೌರವ ಮತ್ತು ಇಳಿ ವಯಸ್ಸಿನಲ್ಲಿ ಹಿರಿಯರ ಬಗ್ಗೆ ತೊರಬೇಕಾದ ಕಾಳಜಿ, ಪ್ರೀತಿ, ಗೌರವಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಇಲ್ಲಿನ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಅಧ್ಯಯನ ನಿಮಿತ್ತ ಗೋಶಾಲೆ ಹಾಗೂ ವೃದ್ಧಾಶ್ರಮ ಭೇಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೈನುಗಾರಿಕೆ ಹಾಗೂ ಗೋವುಗಳ ವಿವಿಧ ತಳಿಗಳ ಬಗ್ಗೆ ಅಧ್ಯಯನ ಮಾಡಲು ತೆಳ್ಳಾರಿನಲ್ಲಿರುವ ವೆಂಕಟರಮಣ ಗೋಶಾಲೆಗೆ ಭೇಟಿ ನೀಡಲಾಯಿತು. ಅದೇ ರೀತಿ ತೆಳ್ಳಾರಿನಲ್ಲಿರುವ ವಾತ್ಸಲ್ಯ ಸೇವಾ ಟ್ರಸ್ಟ್ನ ವೃದ್ಧಾಶ್ರಮಕ್ಕೆ ಭೇಟಿ ನೀಡಿ ಅಲ್ಲಿಯ ಕಾರ್ಯಚಟುವಟಿಕೆಗಳು ಹಾಗೂ ಹಿರಿಯ ನಾಗರೀಕರ ಜೀವನದ ಅನುಭವಗಳನ್ನು ವಿದ್ಯಾರ್ಥಿಗಳು ತಿಳಿದುಕೊಂಡರು. ಹಿರಿಯ ನಾಗರೀಕರಾದ ಶ್ರೀ ದಿವಾಕರ ಬಾಳಿಗಾ ಅವರು ಷೇರು ಮಾರುಕಟ್ಟೆ ಹಾಗೂ ಹೂಡಿಕೆಯ ಕುರಿತು ಮಾಹಿತಿ ನೀಡಿದರು. ವೃದ್ಧಾಶ್ರಮ ಮ್ಯಾನೇಜರ್ ಸಂದೀಪ್ ವಿವಿಧ ಮಾಹಿತಿ ನೀಡಿದರು. ಉಪನ್ಯಾಸಕರಾದ ಉಮೇಶ್ ಬೆಳ್ಳಿಪ್ಪಾಡಿ, ದೀಪಕ್, ಶ್ರೀಮತಿ ಸುಕನ್ಯಾ, ಕು.ಅಭಿನಯ ಭೇಟಿ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.