
ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಮತ್ತು ಪ್ರೌಢಶಾಲೆ, ಗಣಿತನಗರದಲ್ಲಿ ಜೂನ್ 20 ರಂದು ವಿಶ್ವಯೋಗ ದಿನಾಚರಣೆಯನ್ನು ಅತ್ಯಂತ ಶಿಸ್ತು ಮತ್ತು ಕ್ರಮಬದ್ಧವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿರುವ ಮೂಡಬಿದಿರೆಯ ಯೋಗ ತರಬೇತುದಾರರಾದ ತನುಶ್ರೀ ಡಿ. ಬಂಗೇರ ಅವರು ಕಾರ್ಯಕ್ರಮನ್ನು ಉದ್ಘಾಟಿಸಿ, ಯೋಗ ಮತ್ತು ಪ್ರಾಣಾಯಮವು ದಿನನಿತ್ಯ ಎಷ್ಟು
ಅವಶ್ಯಕ ಎಂದು ವಿದ್ಯಾರ್ಥಿಗಳಿಗೆ ತಿಳಿಹೇಳಿದರು. ವೇದಿಕೆಯಲ್ಲಿ ಹಿರಿಯ ಶಿಕ್ಷಕಿ ಪುಷ್ಪಲತಾ ಜೊತೆಗೂಡಿದರು.
ಉಪಪ್ರಾಂಶುಪಾಲೆಯಾದ ವಾಣಿ.ಕೆ ಹಾಗೂ ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ವಿದ್ಯಾರ್ಥಿನಿ ಅವನಿ ಪೈ ಕಾರ್ಯಕ್ರಮ ನಿರೂಪಿಸಿ, ದಿಶಾ ಡಿ ಸ್ವಾಗತಿಸಿ, ವಿದ್ಯಾರ್ಥಿ ತೀಕ್ಷಣ್ ಪ್ರಾರ್ಥಿಸಿ, ನಿಷ್ಕಾ ಧನ್ಯವಾದ ಸಮರ್ಪಿಸಿದರು.


































