24.9 C
Udupi
Friday, March 21, 2025
spot_img
spot_img
HomeBlogಎಲ್ಲೂರು ಗ್ರಾಮದಿಂದ ಜನವಸತಿ ಪ್ರದೇಶದಲ್ಲಿ, 400 ಕೆ.ವಿ ಹೈಟೆನ್ಶನ್ ವಿದ್ಯುತ್ ಹರಿಸುವ ಕುರಿತು ಸಾರ್ವಜನಿಕರಿಂದ ಖಂಡನೆ

ಎಲ್ಲೂರು ಗ್ರಾಮದಿಂದ ಜನವಸತಿ ಪ್ರದೇಶದಲ್ಲಿ, 400 ಕೆ.ವಿ ಹೈಟೆನ್ಶನ್ ವಿದ್ಯುತ್ ಹರಿಸುವ ಕುರಿತು ಸಾರ್ವಜನಿಕರಿಂದ ಖಂಡನೆ

ಜನ ವಿರೋಧಿ ಕಾಮಗಾರಿ ನಡೆಸಿ ಅನಾಹುತಗಳು ಸಂಭವಿಸಿದ್ದಲ್ಲಿ ಸರಕಾರವೇ ನೇರ ಹೊಣೆ

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಸಕ ವಿ. ಸುನಿಲ್ ಕುಮಾರ್

ಉಡುಪಿ, ದ.ಕ ಜಿಲ್ಲೆ ವ್ಯಾಪ್ತಿಯ ಎಲ್ಲೂರು ಗ್ರಾಮದಿಂದ ನಂದಿಕೂರು ಇನ್ನಾ ಮೂಡಬಿದಿರೆ ಜನವಸತಿ ಇರುವ ಮಾರ್ಗದಲ್ಲಿ ಸಾರ್ವಜನಿಕರ ವಿರೋಧದ ನಡುವೆ ಕೇರಳಕ್ಕೆ 400 ಕೆ.ವಿ ಹೈಟೆನ್ಸನ್ ವಿದ್ಯುತ್ ಹರಿಸುವ ಮಾರ್ಗಕ್ಕೆ ಬಲತ್ಕಾರವಾಗಿ ಗೋಪುರ ಅಳವಡಿಸುವ ಸರಕಾರದ ಕ್ರಮ ತೀರಾ ಖಂಡನೀಯ ಎಂದು ಶಾಸಕ ವಿ. ಸುನಿಲ್ ಕುಮಾರ್ ಹೇಳಿದ್ದಾರೆ.
ಸಾರ್ವಜನಿಕರ ವಿರೋಧದವಿದ್ದರೂ ಸರಕಾರ, ಜಿಲ್ಲಾಡಳಿತ ಬಲತ್ಕಾರವಾಗಿ ಈ ಮಾರ್ಗದಲ್ಲಿ ಗೋಪುರ ನಿರ್ಮಿಸಲುಮುಂದಾಗಿದೆ. ಈ ಹಿಂದೆ ನಮ್ಮ ಬಿಜೆಪಿ ಸರಕಾರ ಅಧಿಕಾರದ ಅವಧಿಯಲ್ಲಿ ಸಾರ್ವಜನಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತುಕತೆ ನಡೆಸಿ ಇತ್ಯರ್ಥ ಪಡಿಸಲು ನಿರ್ಧರಿಸಿತ್ತು. ಆದರೀಗ ಕಾಂಗ್ರೆಸ್ ಸರಕಾರ ಸ್ಥಳಿಯರ ವಿಶ್ವಾಸಕ್ಕೆ ತೆಗೆದುಕೊಳ್ಳದೆ ಬಲತ್ಕಾರವಾಗಿ ಕಾಮಗಾರಿ ನಡೆಸಲು ಮುಂದಾಗಿದೆ. ಅಭಿವೃದ್ದಿ ಜನತೆಯ ಜೊತೆಗೆ ಕೊಂಡೊಯ್ಯಬೇಕೆ ಹೊರತು ನಾಗರಿಕರ ವಿರೋಧದವಿದ್ದಾಗ ಬಲವಂತದಿಂದ ನಡೆಸುವುದಲ್ಲ. ಸರಕಾರವು ಜಿಲ್ಲಾಡಳಿತ, ಪೊಲೀಸ್ ಇಲಾಖೆಗೆ ಒತ್ತಡ ಹಾಕಿ ಜನರ ವಿರೋಧ ಕಟ್ಟಿಕೊಂಡು ಕಾಮಗಾರಿ ನಡೆಸಲು ಮುಂದಾದಲ್ಲಿ ಮುಂದಾಗುವ ಅನಾಹುತಗಳಿಗೆ ಸರಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಸಕ ವಿ. ಸುನಿಲ್ ಕುಮಾರ್ ಸರಕಾರವನ್ನು ಎಚ್ಚರಿಸಿದ್ದಾರೆ.

spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page