

ಉಡುಪಿ: ಗುರುವಾರ ಸಂಜೆ ಉಡುಪಿಯ ಪರ್ಕಳ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲನೆ ವೇಳೆಯೇ ಪಿಟ್ಸ್ ಬಂದರೂ ಸಮಯಪ್ರಜ್ಞೆ ಮೆರೆದು ಬಸ್ ಚಾಲಕನೊಬ್ಬ ಸಂಭವಿಸಬಹುದಾದ ಅಪಘಾತವನ್ನು ತಪ್ಪಿಸಿದ್ದಾರೆ.
ಉಡುಪಿಯಿಂದ ಭೈರಂಜೆಗೆ ಹೋಗುತ್ತಿದ್ದಾಗ ಪರ್ಕಳ ಕೆನರಾ ಬ್ಯಾಂಕ್ ಬಳಿ ತಿರುವಿನಲ್ಲಿ, ಚಾಲಕನ ಬಾಯಿಂದ ನೊರೆ ಹೊರಗೆ ಬಂದು, ಪಿಟ್ಸ್ ಕಾಣಿಸಿಕೊಂಡಿತು. ಇದರಿಂದ ಚಾಲಕನ ಕೈಯಿಂದ ಬಸ್ ನಿಯಂತ್ರಣ ತಪ್ಪಿದ್ದು ಏರಿನಲ್ಲಿ ಹತ್ತುತ್ತಿದ್ದ ಬಸ್ ತಕ್ಷಣ ಹಿಮ್ಮುಖ ಚಲಿಸಲಾರಂಭಿಸಿತು. ಈ ಸಂದರ್ಭದಲ್ಲಿ ತನ್ನ ಅಸ್ವಸ್ಥತೆಯ ನಡುವೆಯೂ ಕಷ್ಟಪಟ್ಟು ಹಿಮ್ಮುಖ ಚಲಿಸುತ್ತಿದ್ದ ಬಸ್ಸನ್ನು ಬಲಕ್ಕೆ ತಿರುಗಿಸಿ ಚರಂಡಿಗೆ ಇಳಿಯುವಂತೆ ಮಾಡಿದ್ದಾರೆ.
ನಂತರ ಚಾಲಕನನ್ನು ಆಟೋವೊಂದರಲ್ಲಿ ಮಣಿಪಾಲ ಆಸ್ಪತ್ರೆಗೆ ಕಳುಹಿಸಿದ್ದು ಸ್ಥಳಕ್ಕೆ ಬಂದ ಪೊಲೀಸರ ಸಹಾಯದಿಂದ ಬಸ್ಸನ್ನು ಮೇಲಕ್ಕೆ . ಬಸ್ ಚಾಲಕ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾನೆ ಎಂದು ವರದಿಯಾಗಿದೆ.