
ಉಡುಪಿ: ಬೆಳ್ತಂಗಡಿ ತಾಲೂಕಿನ ಅಳದಂಗಡಿ ಎಂಬ ಊರಲ್ಲಿ ಮಕ್ಕಳ ಸಂಸ್ಥೆಯಾಗಿ ಹುಟ್ಟಿದ ಆಮಂತ್ರಣ ಸಾಹಿತ್ಯದ ದೃಷ್ಟಿಯಿಂದ ಉಡುಪಿ ಜಿಲ್ಲೆಗೂ ಕಾಲಿರಿಸಿದೆ.
10 ವರ್ಷಗಳನ್ನು ಪೂರೈಸಿದ
ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆಯಾಗಿ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ದ.ಕ.ಜಿಲ್ಲಾ ವೇದಿಕೆ ಆಗಿ ಉತ್ತಮವಾದ ಚಟುವಟಿಕೆನ್ನು ಮಾಡುತ್ತಿದೆ.
ಇದೀಗ ಉಡುಪಿ ಜಿಲ್ಲೆಯಾದ್ಯಂತ ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಸಂಚರಿಸಲಿದ್ದು ಇದಕ್ಕಾಗಿ ಶೀಘ್ರದಲ್ಲೇ ಜಿಲ್ಲಾ ಸಮಿತಿ ರಚನೆಯಾಗಲಿದೆ.
ರಾಜ್ಯ ಸದಸ್ಯರಾಗಿ ಹೆಚ್ಕೆ ನಯನಾಡು , ಉಮಾ ಸುನಿಲ್ ಹಾಸನ, ಆಶಾ ಅಡೂರು ಉಜಿರೆ
ವೇದಿಕೆ ರಚನೆಗಳ ಜವಬ್ದಾರಿ ವಹಿಸಿಕೊಂಡಿರುತ್ತಾರೆ.





















