
ಚಿಕ್ಕಬಳ್ಳಾಪುರ : ಗರಿಗ ರೆಡ್ಡಿ ಎಂಬ ಭಕ್ತರ ಮನೆಗೆ ಆಗಮಿಸಿದ ಕೊಡಿಶ್ರೀ, ನಟ ದರ್ಶನ್ ಮತ್ತು ಸಿಎಂ ಸಿದ್ದರಾಮಯ್ಯ ರವರ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ್ದಾರೆ.
ಮಹಾಭಾರತದಲ್ಲಿ ಶ್ರೀ ಕೃಷ್ಣ ಇದ್ದ ಆದಕಾರಣ ಭೀಮ ಗೆದ್ದಿದ್ದ ಈಗ ಶ್ರೀ ಕೃಷ್ಣ ಇಲ್ಲ ಆದಕಾರಣ ದುರ್ಯೋಧನ ಗೆಲ್ಲುತ್ತಾನೆ ಎಂದು ತಿಳಿಸಿದ್ದಾರೆ. ಸಿಎಂ ಸಿದ್ದರಾಮಯ್ಯನವರಿಗೆ ದೈವಬಲ ಇಲ್ಲ ಎನ್ನುವ ಮೂಲಕ ಮಹಾಭಾರತದಲ್ಲಿ ಅಭಿಮನ್ಯುವಿನ ಬಿಲ್ಲಿನ ದಾರವನ್ನು ಮೋಸದಿಂದ ಕರ್ಣನ ಕೈಗೆ ಕಟ್ ಮಾಡಿಸುತ್ತಾರೆ. ಆಗ ಅವನ ಹೆಂಡತಿ ರಂಗ ಪ್ರವೇಶ ಮಾಡುತ್ತಾಳೆ. ಸಿಎಂ ಸಿದ್ದರಾಮಯ್ಯ ಪತ್ನಿ ಸಾರ್ವಜನಿಕವಾಗಿ ಎಲ್ಲಿ ಕಾಣಿಸಿಕೊಂಡಿರಲಿಲ್ಲ. ತನ್ನ ಪತ್ನಿ ರಾಜಕೀಯವಾಗಿ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ ಎಂದು ಸಿಎಂ ನೋಡಿದಿದ್ದರು. ಆದರೆ ಈಗ ಮೂಢಾ ಪ್ರಕರಣದಿಂದಾಗಿ ಸಿಎಂ ಪತ್ನಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವಂತೆ ಆಗಿದೆ. ಹೀಗೆಲ್ಲಾ ಆಗುತ್ತದೆ ಎಂದು ನಾನು ಕಳೆದ ಮೂರು ತಿಂಗಳ ಹಿಂದೆಯೇ ಭವಿಷ್ಯ ನುಡಿದಿದ್ದೆ ಎಂದು ಹೇಳಿದರು. ಇನ್ನು ನಟ ದರ್ಶನ್ ಬಗ್ಗೆ ಪಾಪದ ಪಾಷಣ ಕಳೆಯಬೇಕು ಮಾಡಿದ ಪಾಪವನ್ನು ಅನುಭವಿಸಲೇಬೇಕು ಎಂದು ತಿಳಿಸಿದ್ದಾರೆ.













