ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಮತ್ತು 32ನೇ ವರ್ಷದ ಏಕಾಹ ಭಜನೆ

ಕಾರ್ಕಳ ತಾಲೂಕು ಕಸಬಾ ಗ್ರಾಮದ ಗ್ರಾಮದ ದಾನಶಾಲೆಯಲ್ಲಿರುವ ಶ್ರೀಶಿವಭಕ್ತ ಭಜನಾ ಮಂದಿರ(ರಿ ) 1994ರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಎರಡನೆಯ ಸರಸಂಘ ಚಾಲಕರಾದ ಶ್ರೀಗುರೂಜಿಯವರ ಜನ್ಮ ಶತಾಬ್ದಿ ವರ್ಷದ ನೆನಪಿಗಾಗಿ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಏಕಾಹ ಭಜನೆ ರಾಷ್ಟ್ರೀಯ ನಾಯಕರ ಜನ್ಮ ದಿನಾಚರಣೆ ಸಾಂಸ್ಕೃತಿಕ ಚಟುವಟಿಕೆಗಳಾದ ನಾಟಕ ನೃತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಕೆಲಸಗಳನ್ನು ಮಾಡಿಕೊಂಡು ಬಂದಿರುತ್ತೇವೆ.
10ನೇ ವರ್ಷದ ಸಂದರ್ಭದಲ್ಲಿ ಸಾಮೂಹಿಕ ವಿವಾಹ 25ನೇ ವರ್ಷದ ಸಂದರ್ಭದಲ್ಲಿ ಪುನಃ ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮ ನಡೆದು 75 ಲಕ್ಷಕ್ಕಿಂತ ಹೆಚ್ಚು ವೆಚ್ಚದಲ್ಲಿ ಊರದಾನಿಗಳ ಸರಹಕಾರದಿಂದ ಸುಸಜ್ಜಿತವಾದ ಭಜನಾ ಮಂದಿರವನ್ನು ನಿರ್ಮಿಸಿರುತ್ತೇವೆ.
ಅಷ್ಟೇ ಅಲ್ಲದೆ ಊರ ಪರ ಊರಿನ ಭಜನಾ ಮಂಡಳಿ ದೇವಸ್ಥಾನದಲ್ಲಿ ನಡೆಯುವ ಭಜನೆ ಸ್ವಚ್ಛತೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುತ್ತೇವೆ.
32ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ದಿನಾಂಕ 23.02.2025 ಮತ್ತು ಏಕಾಹ ಭಜನೆ ದಿನಾಂಕ 24.02.2025 ರಿಂದ 25.02.2025ರ ವರೆಗೆ ನಡೆಯಲಿದೆ.













