
ಶ್ರೀ ದುರ್ಗಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಕುಕ್ಕುಂದೂರು. ಇಲ್ಲಿ ಇಂದು 2025- 26 ನೇ ಶೈಕ್ಷಣಿಕ ಸಾಲಿನ ಕಡೆ ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ನಿವೃತ್ತ ಮುಖ್ಯ ಶಿಕ್ಷಕರಾದ ಸತೀಶ್ ಶೆಟ್ಟಿ, ನಿವೃತ್ತ ಶಿಕ್ಷಕರಾದ ಹರೀಶ್ ನಾಯ್ಕ್, ಕೆ.ಸಿ ಲುಕಸ್, ನಿ. ಸ ಶಿಕ್ಷಕಿರತ್ನಾವತಿ ಹಳೆ ವಿದ್ಯಾರ್ಥಿಯಾದ ಎಡ್ವರ್ಡ್ ರವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಶ್ರೀಯುತ ಕಮಲಾಕ್ಷ ಕಾಮತ್ ರವರು ಕುಣಿತ ಭಜನೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸುವುದರ ಮೂಲಕ ಕೆಲವು ಭಜನೆಗಳನ್ನು ಹಾಡಿದರು. ನಂತರ ವಿದ್ಯಾರ್ಥಿಗಳ ಕುಣಿತ ಭಜನೆ ಕಾರ್ಯಕ್ರಮ ನೆರವೇರಿತು. ಇದೇ ಸಂದರ್ಭದಲ್ಲಿ ಜಯಂತಿ ನಗರ ಕ್ಲಸ್ಟರ್ ನಲ್ಲಿ C.R.P ಯಾಗಿ ಸತತ ಏಳು ವರ್ಷಗಳಿಂದ ಪ್ರಾಮಾಣಿಕ ಸೇವೆ ಸಲ್ಲಿಸಿ ಪುನಃ ಶಿಕ್ಷಕ ವೃತ್ತಿಗೆ ತೆರಳುತ್ತಿರುವ ಶ್ರೀಮತಿ ಪ್ರೇಮಾರವರನ್ನು ಶಾಲಾವತಿಯಿಂದ ಗೌರವಿಸಲಾಯಿತು. ಅದೇ ರೀತಿ ನಮ್ಮ ಶಾಲೆಯಲ್ಲಿ ಸುಮಾರು 20 ವರ್ಷಗಳಿಂದ ಗೌರವ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಗೀತಾ ಭಂಡಾರಿ ಅವರನ್ನು ಮುಖ್ಯ ಶಿಕ್ಷಕರಾದ ಜಗದೀಶ್ ಹೆಗಡೆಯವರ ನಾಯಕತ್ವದಲ್ಲಿ ಶಾಲಾ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ರಾಧಾಕೃಷ್ಣ ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕರಾದ ಸತೀಶ್ ಶೆಟ್ಟಿ, ದಯಾನಂದ್ ಕೆ ಹಾಗೂ ಸ. ಶಿಕ್ಷಕರಾದ ಕೆ .ಸಿ ಲುಕಸ್, ಹರೀಶ್ ನಾಯ್ಕ್ ,ರತ್ನಾವತಿ ಹಾಗೂ ನಿವೃತ್ತ ಮುಖ್ಯ ಶಿಕ್ಷಕಿ ಹರ್ಷಿಣಿ ರೊಟೋರಿಯನ್ ಕಸ್ತೂರಿ , ವರ್ಧಮಾನ ಶಿಕ್ಷಣ ಸಂಸ್ಥೆಯ ಸಂಚಾಲಕಿ ಶಶಿಕಲ ಹೆಗ್ಡೆ, ಪೊ ಟೋಗ್ರಾಫರ್ ನಿರಂಜನ್ ಜೈನ್, ಶರತ್ ಕಾನಂಗಿ, ಮರೋಡಿ ಶಾಲೆಯ ಮುಖ್ಯ ಶಿಕ್ಷಕರು, ಹಾಗೂ ಶಾಲಾ ಹಳೆ ವಿದ್ಯಾರ್ಥಿಗಳು , ನಮ್ಮ ಕಾರ್ಲ ಚಾನಲ್ ನ ಅರ್ಚನ ವಿಜೇಶ್ ಶೆಟ್ಟಿ, ಶಾಲಾ ಶಿಕ್ಷಕರು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.C.R.P. ಪ್ರೇಮ ರವರು ಎಲ್ಲಾ ಶಿಕ್ಷಕರಿಗೂ ಕಿರು ಕಾಣಿಕೆ ಹಾಗೂ ಸ್ವೀಟ್ ನೀಡಿದ್ದರು. ಅದೇ ರೀತಿ ಶ್ರೀಮತಿ ಕಸ್ತೂರಿ ಕಾರಂತ್ ಮತ್ತೆ ಹರ್ಷಿಣಿ, ಮರೋಡಿ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಹೂ ವ್ಯಾಪಾರಿ ರಘು ರವರು ಎಲ್ಲರಿಗೂ ಸ್ವೀಟ್ಸ್ ನ ವ್ಯವಸ್ಥೆ ಮಾಡಿದ್ದರು . ಕೊನೆಯಲ್ಲಿ ಎಲ್ಲರಿಗೂ ಭೋಜನದ ವ್ಯವಸ್ಥೆಯನ್ನು ರೋಟೋರಿಯನ್ ಡಾ. ಆಶಾ ಪಿ. ಹೆಗಡೆಯವರ ವತಿಯಿಂದ ಮಾಡಲಾಗಿತ್ತು.






















































































