
ಕುಬುಡೋ ಬುಡಾಕಾನ್ ಡು ಅಸೋಸಿಯೇಶನ್ ವತಿಯಿಂದ ಉದ್ಯಾವರ ಗ್ರಾಮ ಪಂಚಾಯತ್ ಕ್ರೀಡಾಂಗಣದಲ್ಲಿ ನಡೆದ 7ನೇ ರಾಷ್ಟ್ರಮಟ್ಟದ ತುಳುನಾಡು ಕರಾಟೆ ಚಾಂಪಿಯನ್ ಶಿಪ್ – 2025 ಸ್ಪರ್ಧೆ ನೆರವೇರಿತ್ತು. ಈ ಸ್ಪರ್ಧೆಯಲ್ಲಿ ಒಂದೂವರೆ ಸಾವಿರಕ್ಕಿಂತಲೂ ಮಿಗಿಲಾಗಿ ಮಕ್ಕಳು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವರ್ಧಮಾನ ಪ್ರಾಥಮಿಕ ಶಾಲೆ, ಸಾಣೂರು ಕಾರ್ಕಳ ಇಲ್ಲಿಯ ಏಳು ವಿದ್ಯಾರ್ಥಿಗಳಾದ ಈತನ್ ಆಳ್ವ, ಆದಿನ್ ಜೈನ್, ಹಿಮಾಂಶ್, ಸಾನ್ವಿತ್, ಎಲೀಷಾ ಆಳ್ವ, ಹಂಶಿಕಾ ಎಸ್, ನೇಕ್ಲೀನ್ ಲಿಯಾನ ಪಿರೇರ ಬಾಗವಹಿಸಿದ್ದು ಚಿನ್ನ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಗೆದ್ದಿರುತ್ತಾರೆ. ಮಕ್ಕಳ ಈ ಸಾಧನೆಗೆ ಶಾಲಾ ಮುಖ್ಯಸ್ಥರಾದ ಶಶಿಕಲಾ ಕೆ. ಹೆಗ್ಡೆ, ಕುಮಾರಯ್ಯ ಹೆಗ್ಡೆ, ಶಾಲಾ ಆಡಳಿತಾಧಿಕಾರಿಯಾದ ಕರ್ತವ್ಯ ಜೈನ್, ಕರಾಟೆ ತರಬೇತುದಾರರಾದ ರಾಮಚಂದ್ರ ಎಸ್. ಹಾಗೂ ಶಿಕ್ಷಕ ವೃಂದದವರು ಮಕ್ಕಳನ್ನು ಶ್ಲಾಘಿಸಿ ಅಭಿನಂದಿಸಿರುತ್ತಾರೆ.





















