
ಪ್ರಾಥಮಿಕ ಆರೋಗ್ಯ ಕೇಂದ್ರ ಕಾರ್ಲೆ ಹಾಗೂ ರೋಟರಿ ಕ್ಲಬ್ ಹಾಸನ್ ಮಿಟ್ಟೋನ್ ಇವರ ಆಶ್ರಯದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ರೊ ಲಲಿತ್ ಕುಮಾರ್ ಧ್ವಜಾರೋಹಣ ಮಾಡಿ ದೇಶಕ್ಕಾಗಿ ಸ್ವಾರ್ಥಮಾರಿತು ಉತ್ತಮ ಸೇವೆ ಮಾಡಬೇಕು ಹಾಗೂ ದೇಶ ಕಟ್ಟುವುದು ಕೆಲಸದಲ್ಲಿ ಯುವಕರು ಕೈಜೋಡಿಸಬೇಕು ಎಂದು ಕೋರಿದರು
ಡಾಕ್ಟರ್ ತೇಜಸ್ವಿ ಆಡಳಿತ ವೈದ್ಯಾಧಿಕಾರಿ ಮಾತನಾಡಿ ದೇಶ ಕಟ್ಟಲು ಅನೇಕ ಮಹನೀಯರು ತಮ್ಮ ಸರ್ವಸ್ವವನ್ನು ತ್ಯಾಗ ಮಾಡಿದ್ದಾರೆ,ಈಗಿನ ಪೀಳಿಗೆಯವರು ದೇಶ ಬೆಳವಣಿಗೆಯಲ್ಲಿ ಪ್ರಯತ್ನ ಪಡಬೇಕೆಂದು ತಿಳಿಸಿದರು ಹಾಗೂ 3 ವರ್ಷದಿಂದ ಕಾರ್ಲೆಯಲ್ಲಿ ಸಿಬ್ಬಂದಿಗಳು ಉತ್ತಮವಾಗಿ ಕಾರ್ಯ ಮಾಡುತ್ತಿದ್ದು ಆಸ್ಪತ್ರೆಯು ಎಲ್ಲಾ ವಿಭಾಗಗಳಲ್ಲಿ ಜಿಲ್ಲೆಗೆ ಮಾದರಿಯಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಕಾರ್ಲೇ ಸುತ್ತಮುತ್ತಲ ಗ್ರಾಮಗಳಲ್ಲಿ ಉತ್ತಮ ಸೇವೆ ನೀಡುತ್ತಿರುವ ವ್ಯಕ್ತಿಗಳನ್ನು ಸನ್ಮಾನಿಸಲಾಯಿತು
ಸನ್ಮಾನಿತರ ವಿವರ 1.ಮಂಜೇಗೌಡ ಶಿಕ್ಷಕರು ಮುಕುಂದರು ಹೊಸಳ್ಳಿ
- ಪಾಪೇಗೌಡ ನಿವೃತ್ತ ಶಿಕ್ಷಕರು
- ಗಣೇಶ್ ಎ ಎಂ ಕಾರ್ಯನಿರ್ವಾಹಕ ಅಧಿಕಾರಿ ಕಾರ್ಯ ಪ್ರಥಮ ಕೃಷಿ ಪತ್ತಿನ ಸಹಾಯಕರ ಸಂಘ
- ಕುಮಾರಿ ರಚನ ಕಾರ್ಲೆ ರಾಜ್ಯಮಟ್ಟದ ಕ್ರೀಡಾಪಟು
- ಎಸ್ ಶಂಕರೇಗೌಡ ಮುಖೇಶ್ ಶಿಕ್ಷಕರು ಕೆಕೆವಿ ಪ್ರೌಢ ಶಾಲೆ ರಮೇಶ್ ಶಿಕ್ಷಕರು ಸತ್ತಿಗೇರಹಳ್ಳಿ
- ಸುನಿಲ್ ಕುಮಾರ್ ಬಿಎಸ್ಎಫ್ ಸೈನಿಕರು
- ಲೋಕೇಶ್ ಹೇಮಾವತಿ ಪವರ್ ಇನ್ ಲೈಟ್ ಪ್ರೈವೇಟ್ ಲಿಮಿಟೆಡ್ ಗೊರೂರು
- ಕುಮಾರಿ ಯೋಶೋಧ ವಿದ್ಯಾರ್ಥಿನಿ ಕೆ ಕೆ ವಿ ಹೈ ಸ್ಕೂಲ್
- ಸುಧಾ ಅಂಗನವಾಡಿ ಮೇಲ್ವಿಚಾರಕರು
ರೊ ಡಾಕ್ಟರ್ ನಾಗೇಶ್, ರೊ ರಮಾನಂದ್,ರೊ ವೆಂಕಟೇಶ್ ಕಾರ್ಯದರ್ಶಿ ,ರೊ ಮಹೇಶ್ ಗೌಡ ಡಾಕ್ಟರ್ ಆದಿತ್ಯ ,ಕೇಶವ್ ಕಾರ್ಲೆ ಮೋಹನ್ ಕಾರ್ಲೆ, ಕೇಶವ್ ಅಧ್ಯಕ್ಷರು ಕಾರ್ಲೆ , ಸೀಮಾ ಪಿಡಿಒ ಗ್ರಾಮ ಪಂಚಾಯತಿ, ಶ್ಯಾಮ್ ಕಾರ್ಲೆ, ಕಾರ್ಲೆ ಆರೋಗ್ಯ ಸಿಬ್ಬಂದಿ ಅಂಗನವಾಡಿ ಸಿಬ್ಬಂದಿ ಉಪಸ್ಥಿರಿದ್ದರು.


































