ಸಾಮೂಹಿಕ ಆಶ್ಲೇಷ ಬಲಿ ಹಾಗೂ ನಾಗ ಸಂದರ್ಶನ

ದಿನಾಂಕ 18-08-2024 ಸಾರ್ವಜನಿಕ ಸತ್ಯ ಸಾರಮಣಿ ಹಲೇರಾ ಪಂಜುರ್ಲಿ ಮತ್ತು ಪರಿವಾರ ದೈವಗಳ ಕ್ಷೇತ್ರ ಸಮಿತಿ (ರಿ )ಸಂಜೆ 6.30 ಕುಣಿತ ಭಜನೆಯ ಉದ್ಘಾಟನೆಯು ಗಣ್ಯರಿಂದ ನಡೆಯಲಿದ್ದು ನಂತರ ಸದಸ್ಯರಿಂದ ಕುಣಿತ ಭಜನೆಯು ನಡೆಯಲಿದೆ.
ಸೋಮವಾರ ದಿನಾಂಕ 19-08-2024 ಸೋಮವಾರದಂದು ಬೆಳಿಗ್ಗೆ 6.05 ರಿಂದ ಶ್ರೀ ನಾಗದೇವರ ಆರನೇ ಪ್ರತಿಷ್ಠಾ ವರ್ದಂತಿ ಪ್ರಯುಕ್ತ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಕೆ. ಕಿಶೋರ್ ಶಾಂತಿ ಇವರ ನೇತೃತ್ವದಲ್ಲಿ ಸಾಮೂಹಿಕ ಆಶ್ಲೇಷ ಬಲಿ ಹಾಗೂ ನಾಗ ಸಂದರ್ಶನ ನಾಗಪಾತ್ರಿ ದಯಾನಂದ ಧರ್ಮದರ್ಶಿ, ಶ್ರೀ ಆದಿಮಾಯೆ ದೇವಸ್ಥಾನ ಜೆಪ್ಪಿನ ಮೊಗರು ಮಂಗಳೂರು ಇವರಿಂದ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.














