
ಚೆನ್ನೈ: ಮದ್ರಾಸ್ ಐಐಟಿ ನಿರ್ದೇಶಕ ವಿ ಕಾಮಕೋಟಿ ಅವರು ಗೋಮೂತ್ರದಲ್ಲಿ ಬ್ಯಾಕ್ಟೀರಿಯ ವಿರೋಧಿ, ಶಿಲೀಂದ್ರ ವಿರೋಧಿ ಗುಣ ಇರುವುದರಿಂದ ಇದು ಜ್ವರ ಕಡಿಮೆ ಮಾಡುವ ಔಷಧಿ ಕೂಡ ಹೌದು ಎಂದು ಹೇಳಿದ್ದಾರೆ.
ಈ ಕುರಿತು ಒಂದು ವಿಡಿಯೋ ವೈರಲ್ ಆಗಿದ್ದು ಈ ವಿಡಿಯೋದಲ್ಲಿ ಘಟನೆಯೊಂದನ್ನು ಉಲ್ಲೇಖಿಸಿರುವ ಅವರು ಒಮ್ಮೆ ಸನ್ಯಾಸಿಗೆ ಜ್ವರ ಬಂದಿದ್ದಾಗ ಔಷಧವಾಗಿ ಕೇವಲ ಗೋಮೂತ್ರ ಮಾತ್ರ ಸೇವಿಸಿದ್ದರು. ಆಗ ಅವರ ಜ್ವರ ಕಡಿಮೆಯಾಯಿತು ಎಂದು ಹೇಳಿದ್ದು ಈ ಕುರಿತು ಭಾರಿ ಚರ್ಚೆ ನಡೆಯುತ್ತಿದೆ.





















