
ಕಾರ್ಕಳ: ಪದವಿಪೂರ್ವ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ
ಇವರ ವತಿಯಿಂದ ಸಾಣೂರಿನ ರಾಜೇಶ್ವರಿ ಪದವಿಪೂರ್ವ
ಕಾಲೇಜಿನಲ್ಲಿ ನಡೆದ ಕಾರ್ಕಳ ತಾಲೂಕು ಮಟ್ಟದ
ಪದವಿಪೂರ್ವ ವಿಭಾಗದ ವಾಲಿಬಾಲ್ ಪಂದ್ಯಾಟದಲ್ಲಿ ಕಾರ್ಕಳ
ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡ
ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ.
ಅದೇ ರೀತಿ ಬಾಲಕರ ವಿಭಾಗದಲ್ಲಿ ಮೂವರು ವಿದಾರ್ಥಿಗಳು
ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕಿಯರ
ತಂಡವನ್ನು ಪ್ರತಿನಿಧಿಸಿದ್ದ ದ್ವಿತೀಯ ವಿಜ್ಞಾನ ವಿಭಾಗದ
ಶ್ರಾವ್ಯ ಶೆಟ್ಟಿ, ಜಿ.ಪ್ರೀತಾ, ದ್ವಿತೀಯ ವಾಣಿಜ್ಯ ವಿಭಾಗದ ರಕ್ಷಾ,
ಪ್ರಥಮ ವಿಭಾಗದ ರಫಿಯಾ ಬಾನು, ಪ್ರಥಮ ವಾಣಿಜ್ಯ
ವಿಭಾಗದ ಸಾಂಚಿ ರಾವ್, ರಕ್ಷಿತಾ ಜಿಲ್ಲಾಮಟ್ಟಕ್ಕೆ
ಆಯ್ಕೆಯಾಗಿದ್ದಾರೆ. ಬಾಲಕರ ತಂಡ ಪ್ರತಿನಿಧಿಸಿದ್ದ
ದ್ವಿತೀಯ ವಾಣಿಜ್ಯ ವಿಭಾಗದ ಶಾವನ್, ಶ್ರೀರಿಷಿ, ಶಶಾಂತ್
ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.




































