ಹಿರಿಯ ಕಲಾವಿದರು ಇಂತಹ ವರ್ತನೆಗಳ ವಿರುದ್ಧ, ಧ್ವನಿ ಎತ್ತಿದ್ದರು
ಉಜಿರೆ ಅಶೋಕ್ ಭಟ್, ಸಮರ್ಥನೆ

ಇತ್ತೀಚೆಗೆ ಧರ್ಮಸ್ಥಳ ಮೇಳದ ಕಲಾವಿದ ಉಜಿರೆ ಅಶೋಕ್ ಭಟ್ ಯಕ್ಷಗಾನ ಪ್ರದರ್ಶನದ ವೇಳೆ ಪ್ರೇಕ್ಷಕರ ವರ್ತನೆಯ ವಿರುದ್ಧ ರಂಗಸ್ಥಳದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಘಟನೆ ವಿಡಿಯೋ ಮೂಲಕ ವೈರಲ್ ಆಗಿದ್ದು, ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.
ಮಾರ್ಚ್ 25ರಂದು ಕುಂದಾಪುರದ ಹೆನ್ನಬೈಲು ಬಕ್ರಮನೆ ಎಂಬಲ್ಲಿ ಶ್ರೀ ಕೃಷ್ಣ ಪಾರಿಜಾತ ನರಕಾಸುರ ಮೋಕ್ಷ ಪ್ರಸಂಗದಲ್ಲಿ, ಪ್ರೇಕ್ಷಕರು ಶಿಳ್ಳೆ ಹಾಕಿದ ಶಬ್ದ ಕೇಳುತ್ತಿದ್ದಂತೆ ಕೋಪಗೊಂಡ ಶ್ರೀ ಕೃಷ್ಣ ಪಾತ್ರಧಾರಿ ಅಶೋಕ್ ಭಟ್ ಪ್ರೇಕ್ಷಕರನ್ನು ದೊಂಬರಾಟ ನಡೆಯುತ್ತಿಲ್ಲ, ಇದು ಕೋಳಿ ಕಟ್ಟ ಕಂಬಳ ಅಲ್ಲ ,ಯಕ್ಷಗಾನ ನಡೆಯುತ್ತಿರುವಾಗ ಶಿಳ್ಳೆ ಊದುವುದು ಸರಿಯಾದ ಕ್ರಮವಲ್ಲ ಎಂದು ತರಾಟೆಗೆ ತೆಗೆದುಕೊಂಡಿದ್ದರು.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದಂತೆ, ಪ್ರೈಮರಿ ಹೈಸ್ಕೂಲ್ ವಿದ್ಯಾರ್ಥಿಗಳಂತೆ ಕಾಣಿಸುವ ಸುಮಾರು ಹತ್ತು ಮಂದಿ ಹುಡುಗರ ತಂಡ ಯಕ್ಷಗಾನ ಆರಂಭಗೊಂಡ ಕ್ಷಣದಿಂದ ಅಂಗಡಿಯಲ್ಲಿ ಸಿಗುವ ಬಿಗಿಲು ಶಬ್ದ ಮಾಡಿ ಎಲ್ಲರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದರು. ನಾನು ಪ್ರೇಕ್ಷಕ ಹೇಗೆ ಇರಬೇಕೆಂದು ಬುದ್ದಿ ಹೇಳಿದ್ದೇನೆ ನಾನು ಮಾತ್ರ ಅಲ್ಲದೆ ಅಲ್ಲಿದ್ದ ಹಲವರು ಅವರಿಗೆ ಬೈದಿದ್ದಾರೆ. ಪ್ರೇಕ್ಷಕರಿಗೆ ಕಲಾವಿದನ ಅಭಿನಯ ಇಷ್ಟವಾದಲ್ಲಿ ಆತ ನಿರ್ಗಮಿಸುವ ವೇಳೆ ಚಪ್ಪಾಳೆ ತಟ್ಟಬೇಕು. ವೇದಿಕೆ ಏರುವಾಗ ಅಥವಾ ವೇದಿಕೆಯಲ್ಲಿ ಇರುವಾಗ ಇದು ಸಮಂಜಸವಲ್ಲ ಹಿಂದೆ ಶ್ರೇಣಿ ಗೋಪಾಲಕೃಷ್ಣ ಭಟ್ ಹಾಗೂ ಇತರ ಹಿರಿಯ ಕಲಾವಿದರು ಕೂಡ ಇಂತಹ ವರ್ತನೆಯ ಬಗ್ಗೆ ರಂಗಸ್ಥಳದಲ್ಲಿ ಪ್ರೇಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದರು ಎಂದು ಉಜಿರೆ ಅಶೋಕ್ ಭಟ್ ಸಮರ್ಪಿಸಿಕೊಂಡಿದ್ದಾರೆ.






















































