ಮಾಧ್ಯಮಗಳ ಕಾರ್ಯವೈಖರಿಯ ಬಗ್ಗೆ ರಮೇಶ್ ಕುಮಾರ್ ಟೀಕೆ

ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ನಗರದಲ್ಲಿ ಕಾರ್ಯಕ್ರಮ ಒಂದರಲ್ಲಿ ಮಾತನಾಡಿ ಒಂದೇ ಕೋಣೆಯಲ್ಲಿ 10,000 ನಾಗರಹಾವುಗಳ ಜೊತೆ ಬದುಕಬಲ್ಲೆ, ಆದರೆ ಒಂದೇ ಒಂದು ಕ್ಯಾಮರಾ ಎದುರಿಗೆ ಬಂದು ಬಿಟ್ಟರೆ ತುಂಬಾ ಹೆದರಿಬಿಡುತ್ತೇನೆ ಎಂದು ಮಾಧ್ಯಮಗಳ ಕಾರ್ಯವೈಕರಿಯ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸದನದಲ್ಲಿ ವಿಧಾನಸಭಾಧ್ಯಕ್ಷರಾಗಿದ್ದಾಗ ಹೇಳಿದ ಗಾದೆ ಮಾತಿಗೆ ರಾಜ್ಯಾದ್ಯಂತ ಮೂರು ದಿನಗಳ ಕಾಲ ಹೋರಾಟ ನಡೆದಿದ್ದು ಸಿಪಿಎಂ ನವರು ಕೂಡ ಅದರಲ್ಲಿ ಕೈಜೋಡಿಸಿದ್ದರು. ಆದರೆ ಅದೇ ಸದನದಲ್ಲಿ ತಾವು ಪ್ರತಿಯೊಬ್ಬರೂ ಗೌರವಾನ್ವಿತ ಜೀವನ ಸಾಗಿಸಲು ಅಗತ್ಯವಿರುವ ಸಾಮಾಜಿಕ, ಆರ್ಥಿಕ ಹಾಗೂ ಆರೋಗ್ಯ ಸೇವೆಗಳು ಪ್ರತಿಯೊಬ್ಬರಿಗೂ ದಕ್ಕಬೇಕು ಎಂದು ಹೇಳಿದ್ದು ಸುದ್ದಿಯೇ ಆಗಲಿಲ್ಲಾ ಎಂದು ಬೇಸರ ವ್ಯಕ್ತಪಡಿಸಿದರು.



















