
ನವದೆಹಲಿ: ಭಾರತವು ಪೆಹಲ್ಗಾಂನಲ್ಲಿ ನಡೆದ ಭಯೋತ್ಪಾದಕರ ದಾಳಿಯ ಬಳಿಕ ಪಾಕಿಸ್ತಾನದ ವಿರುದ್ಧ ಸಿಂಧೂ ನದಿ ಒಪ್ಪಂದ, ವಾಘ ಗಡಿ ಸ್ಥಗಿತ ಸೇರಿದಂತೆ ಪ್ರಮುಖ ನಿರ್ಧಾರ ಕೈಗೊಂಡಿದ್ದು ಇದೀಗ ಪಾಕಿಸ್ತಾನ ಜೊತೆಗಿನ ಎಲ್ಲಾ ಅಮದು ವಹಿವಾಟು ಬ್ಯಾನ್ ಮಾಡಿ ಪಾಕಿಸ್ತಾನಕ್ಕೆ ಮತ್ತೊಂದು ಶಾಕ್ ನೀಡಿದೆ.
ಇದೀಗ ಪಾಕಿಸ್ತಾನದ ಹಾಗೂ ಪಾಕಿಸ್ತಾನ ಮೂಲದ ಯಾವುದೇ ವಸ್ತುಗಳು ಅಂದರೆ ಪರೋಕ್ಷವಾಗಿಯೂ ಭಾರತ ಆಮದು ಮಾಡಿಕೊಳ್ಳುವಂತಿಲ್ಲ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಆದೇಶ ಹೊರಡಿಸಿದೆ.
ಪೆಹಲ್ಗಾಂ ದಾಳಿ ಹಿಂದೆ ಪಾಕಿಸ್ತಾನ ಉಗ್ರರು, ಕಾಶ್ಮೀರಯ ಸ್ಥಳೀಯ ಉಗ್ರರು, ಪಾಕಿಸ್ತಾನ ಸೇನೆ, ಐಎಸ್ಐ ಕೈವಾಡಗಳ ಸುಳಿವು ಸಿಕ್ಕಿದ್ದು ಇದರ ಬೆನ್ನಲ್ಲೇ ಕೇಂದ್ರ ವಾಣಿಜ್ಯ ಸಚಿವಾಲಯ ಪಾಕಿಸ್ತಾನ ಜೊತೆ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷಾಗಿ ಯಾವುದೇ ಆಮದು ವ್ಯವಹಾರವಿಲ್ಲ ಎಂದು ಘೋಷಿಸಿದೆ.













