
ಕಾರ್ಕಳ :ಹೊಸ ವರುಷ ಯುಗಾದಿ ಹಬ್ಬದ ಪ್ರಯುಕ್ತ ಶ್ರೀ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ಮಕ್ಕಳಿಗೆ ಶೇರಿಂಗ್ ಕೇರಿಂಗ್ ಚಟುವಟಿಕೆಯನ್ನು ನಡೆಸಲಾಯಿತು.
ಮಕ್ಕಳೆಲ್ಲರೂ ಈ ಚಟುವಟಿಕೆಯಲ್ಲಿ ಆಸಕ್ತಿಯಿಂದ ಭಾಗವಹಿಸಿ,ತಾವು ತಂದ ಹಣ್ಣುಗಳಿಂದ ವಿವಿಧ ಬಗೆಯ ಹಣ್ಣಿನ ಸಲಾಡ್ ಗಳನ್ನು ತಯಾರಿಸಿ ಪರಸ್ಪರ ಒಬ್ಬರಿಗೊಬ್ಬರು ಹಂಚಿಕೊಂಡು ಸಂಭ್ರಮಿಸಿದರು.ಈ ಚಟುವಟಿಕೆಯು ಮಕ್ಕಳಲ್ಲಿ ಪರಸ್ಪರ ಹಂಚಿಕೊಳ್ಳುವ ಹಾಗೂ ಕಾಳಜಿಯನ್ನು ಬೆಳೆಸಲು ಸಹಾಯಕವಾಗುತ್ತದೆ.




