
ರಾಷ್ಟ್ರೀಯ ವಿಜ್ಞಾನ ದಿನದ ಅಂಗವಾಗಿ ಮಾಹೆಯ(ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್) ಪ್ರಾಯೋಜಿತಕ್ಕೊಳಪಟ್ಟ ಸುಮಾರು ಹದಿನೈದು ಸಂಸ್ಥೆಗಳ ವಿಧ್ಯಾರ್ಥಿಗಳಿಗೆ ಸೈನ್ಸ್ ಡ್ರಾಯಿಂಗ್, ಸೈನ್ಸ್ ಸೆಮಿನಾರ್ ಮತ್ತು ಸೈನ್ಸ್ ಮಾಡೆಲ್ ಮೇಕಿಂಗ್ ಸ್ಪರ್ಧೆಗಳನ್ನು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ನ ಜೀವ ವಿಜ್ಞಾನ ವಿಭಾಗದವರು ನಡೆಸಿಕೊಟ್ಟರು. ಪ್ರಥಮ ಹಂತದಲ್ಲಿ ಶಾಲಾ ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳು ಮಾಹೆಯಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಶ್ರೀ ಭುವನೇಂದ್ರ ರೆಸಿಡೆನ್ಸಿಯಲ್ ಸ್ಕೂಲ್ ನ ಎಂಟನೆಯ ತರಗತಿಯ ವಿದ್ಯಾರ್ಥಿ ಕಾರ್ತಿಕೇಯ ಮೆಲವಂಕಿ ಸೀನಿಯರ್ ವಿಭಾಗದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಸಂಸ್ಥೆಗೆ ಕೀರ್ತಿಯನ್ನು ತಂದಿದ್ದಾರೆ. ಜೂನಿಯರ್ ವಿಭಾಗದಲ್ಲಿ 7 ನೆಯ ತರಗತಿಯ ಓಜಸ್ ಭಟ್ ತೃತೀಯ ಸ್ಥಾನ ಪಡೆದಿದ್ದಾರೆ.

ಸೀನಿಯರ್ ವಿಭಾಗದ ಸೈನ್ಸ್ ಡ್ರಾಯಿಂಗ್ ನಲ್ಲಿ 8 ನೆಯ ತರಗತಿಯ ಇಶಾನ್ ವಾಜ್ ತೃತೀಯ ಸ್ಥಾನ, ಜೂನಿಯರ್ ವಿಭಾಗದಲ್ಲಿ ಶೌರ್ಯ ಎಂ ಸುಧೀರ್ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ವಿಜೇತ ಮಕ್ಕಳಿಗೆ ಇಸ್ರೋ ದ ಯು ಆರ್ ರಾವ್ ಸೆಟಲೈಟ್ ಸೆಂಟರ್ ನ ಅಸೋಸಿಯೇಟ್ ಡೈರೆಕ್ಟರ್ ಮೇಡಂ ನಿಗರ್ ಶಾಜಿ ಇವರು ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ಒಂಭತ್ತನೆಯ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸೌರಭ್ ಪುತ್ರನ್ ಹಾಗೂ ಪೂರ್ವಿ ಚೆನ್ನಪ್ಪ ಇವರುಗಳು ಮಾಹೆಯಲ್ಲಿ ನಡೆದ ಒಂದು ವಾರಗಳ ವಿಜ್ನಾನ ಶಿಬಿರಕ್ಕೆ ಆಯ್ಕೆಯಾಗಿದ್ದರು. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ ಶ್ರೀ ಭುವನೇಂದ್ರ ಕಾಲೇಜು ಟ್ರಸ್ಟ್, ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು ಸಂತಸವನ್ನು ವ್ಯಕ್ತ ಪಡಿಸಿ ಶುಭ ಹಾರೈಸಿದ್ದಾರೆ.























































