ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕಾರ್ಕಳ ಸಮಿತಿಯ ಅಧ್ಯಕ್ಷರಾದ ಪ್ರೊ. ಮಿತ್ರ ಪ್ರಭಾ ಹೆಗ್ಡೆ, ಮುಂಬಯಿ ಶಾಖೆ ಉದ್ಘಾಟನೆ

ತರುಣ ಭಾರತ ಚಾರಿಟೇಬಲ್ ಟ್ರಸ್ಟ್ (ರಿ.) ಹೆರ್ಮುಂಡೆ, ಕಾರ್ಕಳ ತಾಲೂಕು ಇದರ ಶಾಖೆಯನ್ನು ಮುಂಬಯಿಯ ಕಿಸನ್ ನಗರ ಠಾಣೆ ಇಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕಾರ್ಕಳ ಸಮಿತಿಯ ಅಧ್ಯಕ್ಷರಾದ ಪ್ರೊ. ಮಿತ್ರಪ್ರಭಾ ಹೆಗ್ಡೆ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಶ್ರೀ ಸತೀಶ್ ಹೆಗ್ಡೆ ಅಧ್ಯಕ್ಷರು ತರುಣ ಭಾರತ ಚಾರಿಟೇಬಲ್ ಟ್ರಸ್ಟ್ ಹೆರ್ಮುಂಡೆ ಕಾರ್ಕಳ ತಾಲೂಕು, ಪ್ರಕಾಶ್ ಆಳ್ವ ಗೌರವಾಧ್ಯಕ್ಷರು ತುಳು ಕೂಟ ಐರೋಲಿ, ಶಶಿಧರ ಶೆಟ್ಟಿ ಕಾರ್ಯದರ್ಶಿ , ಸುನಿಲ್ ಶೆಟ್ಟಿ ಕೋಶಾಧಿಕಾರಿ, ಶೇಖರ ಹೆಗ್ಡೆ ,ಶ್ರೀ ದಯಾನಂದ ಹೆಗ್ಡೆ, ನವೋದಯ ಕನ್ನಡ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರುಗಳು. ಮಹಿಳಾ ವಿಭಾಗದ ಕಾರ್ಯದರ್ಶಿ ಶ್ರೀಮತಿ ಸುಗಂಧಿ ಹೆಗ್ಡೆ ಕೋಶಾಧಿಕಾರಿ ಶ್ರೀಮತಿ ರೇಣುಕಾ ದೇವಾಡಿಗ ತುಳು ಲಿಪಿಯ ಶಿಕ್ಷಕಿಯರಾದ ಶ್ರೀಮತಿ ಪುಷ್ಪ ದೇವಾಡಿಗ ಹಾಗೂ ಶ್ರೀಮತಿ ಶೋಭಾ ಶೆಟ್ಟಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.



















