ಡಿ. 28ನೇ ಶನಿವಾರ,ತಾಲೂಕು ಗಮಕ ಸಮ್ಮೇಳನ
ಶ್ರೀಮದ್ ಭುವನೇಂದ್ರ ಪ್ರೌಢಶಾಲೆ , ಶ್ರೀ ವರದೇಂದ್ರ ಸದನ ಸಭಾಂಗಣ

ಕಾರ್ಕಳ: ಡಿ.28 2024ನೇ ಶನಿವಾರದಂದು ಶ್ರೀಮದ್ ಭುವನೇಂದ್ರ ಪ್ರೌಢಶಾಲಾ ಶ್ರೀ ವರದೇಂದ್ರ ಸದನ ಸಭಾಂಗಣದಲ್ಲಿ ತಾಲೂಕು ಗಮಕ ಸಮ್ಮೇಳನ ನಡೆಯಲಿದೆ.

ಈ ಕಾರ್ಯಕ್ರಮವು ಶ್ರೀ ಮುನಿರಾಜ ರೆಂಜಾಳ ಅವರ ಅಧ್ಯಕ್ಷತೆಯಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 5:00 ತನಕ ನಡೆಯಲಿದೆ.ಶ್ರೀ ವ್ಯಾಸ ರಘುಪತಿ ಸಂಸ್ಕೃತ ವಿದ್ಯಾಶಾಲಾ ಫಂಡ್ (ರಿ) ಕಾರ್ಕಳ ಇದರ ಅಧ್ಯಕ್ಷರಾದ ಎ ಯೋಗೀಶ್ ಹೆಗ್ಡೆ ಅವರು ಈ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಅತಿಥಿಗಳಾಗಿ ರಾಮ ಭಟ್ ಎಸ್, ಕಮಲಾಕ್ಷ ಕಾಮತ್ ಕೆ, ನಿತ್ಯಾನಂದ ಪೈ, ಭಾಸ್ಕರ್ ಟಿ, ಶ್ರೀಮತಿ ಅನುಪಮಾ ದೇವಿ ಚಿಪ್ಲೂಣಕರ್, ಆರ್ ನಾರಾಯಣ ಶೆಣೈ ಹಾಗೂ ಮತ್ತಿತರರು ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ನಿರೂಪಣೆಯನ್ನು ಗಣೇಶ್ ಜಾಲ್ಸೂರು ಇವರು ನಡೆಸಲಿದ್ದಾರೆ.
ಬೆಳಗ್ಗೆ 10:30 ರಿಂದ ಗಮಕ ವಾಚನ-ವ್ಯಾಖ್ಯಾನ “ಸಾವಿತ್ರಿಯ ಬಾಲ್ಯ”, 11:00 ರಿಂದ ಗಮಕವಾಚನ- ವ್ಯಾಖ್ಯಾನ “ಕರ್ಣಭೇದ”, 11:30 ರಿಂದ “ಕಾವ್ಯೋಲ್ಲಾಸ” ಮಧ್ಯಾಹ್ನ 2 ಗಂಟೆಯಿಂದ “ಗಮಕ -ದೃಶ್ಯ ರೂಪಕ”, 2:35 ರಿಂದ “ಊರ್ವಶಿಯ ಪ್ರಣಯ ಪ್ರಸಂಗ” ಕಾರ್ಯಕ್ರಮಗಳು ನಡೆಯಲಿದೆ.
ಈ ಸಮ್ಮೇಳನಕ್ಕೆ ಆರ್ಥಿಕ ನೆರವು ನೀಡುವವರು ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಕಾರ್ಕಳ ಮತ್ತು “ಕರ್ನಾಟಕ ಗಮಕ ಕಲಾ ಪರಿಷತ್ತು” ಉಳಿತಾಯ ಖಾತೆ ನಂಬರ್ 4042500101900101 ಈ ಖಾತೆಗೆ ಚೆಕ್ ಅಥವಾ ಡಿಡಿ ನೀಡುವ ಮೂಲಕ ಸಹಕರಿಸಬೇಕಾಗಿ ವಿನಂತಿ ಮಾಡಲಾಗಿದೆ.




















