-ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯನ್ನು ಶ್ರೇಷ್ಟತೆಯ ಕಡೆಗೆ ಕೊಂಡೊಯ್ಯುವ ಪಣ

ಕಾರ್ಕಳ, ನವೆಂಬರ್ 6 – ಕಾರ್ಕಳ ಸರಕಾರಿ ಪ್ರಥಮ ದರ್ಜೆ ಕಾಲೇಜು ,ಇತಿಹಾಸ ಪ್ರಾಧ್ಯಾಪಕರಾದ ಡಾ. ಸುರೇಶ್ ರೈ ಅವರನ್ನು ಹೊಸ ಪ್ರಾಚಾರ್ಯರಾಗಿ ಸ್ವಾಗತಿಸಿದೆ. ಡಾ. ರೈ ಅವರು ನವೆಂಬರ್ 6 ರಂದು ಎಲ್ಲಾ ಸಿಬ್ಬಂದಿಯ ಸಮ್ಮುಖದಲ್ಲಿ ತಮ್ಮ ಕಾರ್ಯಭಾರವನ್ನು ಸ್ವೀಕರಿಸಿದರು.
ಡಾ. ಚಂದ್ರಾವತಿ ಅವರು ಡಾ. ರೈ ಅವರಿಗೆ ಅಧಿಕಾರವನ್ನು ಅಧಿಕೃತವಾಗಿ ಹಸ್ತಾಂತರಿಸುವುದರ ಮೂಲಕ, ಕಾಲೇಜಿನ ಪ್ರಯಾಣದಲ್ಲಿ ಹೊಸ ಅಧ್ಯಾಯಕ್ಕೆ ತೆರೆ ಎಳೆದರು.
ಮೂವತ್ತೆರಡು ವರ್ಷಗಳಿಗಿಂತಲೂ ಹೆಚ್ಚಿನ ಶಿಕ್ಷಣ ಅನುಭವವನ್ನು ಹೊಂದಿರುವ ಡಾ. ರೈ ಅವರು ಅಪಾರ ಜ್ಞಾನ ಮತ್ತು ಪರಿಣತಿಯನ್ನು ತಮ್ಮೊಂದಿಗೆ ತಂದುಕೊಟ್ಟಿದ್ದಾರೆ. ಹಿಂದೆ ತೇಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾಗಿದ್ದ ಅವರು ಖ್ಯಾತ ಶಿಕ್ಷಣ ತಜ್ಞರು ಮತ್ತು ದಕ್ಷ ಆಡಳಿತಗಾರ.
ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದ, ಡಾ. ರೈ ಅವರು ಸಹಕಾರದ ಮತ್ತು ಸಮನ್ವಯದ ಮೇಲೆ ಧ್ಯಾನ ಕೇಂದ್ರೀಕರಿಸುತ್ತಾ, “ಈ ಕಾಲೇಜನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಎಲ್ಲ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳೊಂದಿಗೆ ಹತ್ತಿರವಾಗಿ ಕೆಲಸ ಮಾಡುವ ನಿರೀಕ್ಷೆಯಲ್ಲಿ ಇದ್ದೇನೆ” ಎಂದು ಹೇಳಿದರು.






















































