28.2 C
Udupi
Friday, April 24, 2026
spot_img
spot_img
HomeBlogಕಾರ್ಕಳ: ಹಿರಿಯಂಗಡಿ ಶ್ರೀ ಭುಜಬಲಿ ಬ್ರಹ್ಮಚಾರ್ಯ ಶ್ರಮದಲ್ಲಿ, "ದಶಲಕ್ಷಣ ಪರ್ವ"

ಕಾರ್ಕಳ: ಹಿರಿಯಂಗಡಿ ಶ್ರೀ ಭುಜಬಲಿ ಬ್ರಹ್ಮಚಾರ್ಯ ಶ್ರಮದಲ್ಲಿ, “ದಶಲಕ್ಷಣ ಪರ್ವ”

ಕಾರ್ಕಳ ಹಿರಿಯಂಗಡಿ ಶ್ರೀ ಭುಜಬಲಿ ಬ್ರಹ್ಮಚರ್ಯಾಶ್ರಮದಲ್ಲಿ ದಿನಾಂಕ 08.09.2024 ನೇ ಭಾನುವಾರದಿಂದ ದಿನಾಂಕ 10.09.2024 ನೇ ಮಂಗಳವಾರದವರೆಗೆ ಕಾರ್ಕಳ ದಾನಶಾಲಾ ಜೈನ ಮಠದ ರಾಜಗುರು ಧ್ಯಾನ ಯೋಗಿ ಪರಮಪೂಜ್ಯ ಸ್ವಸ್ತಿ ಶ್ರೀ ಲಲಿತ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ದಶಲಕ್ಷಣ ಪರ್ವವನ್ನು ಶ್ರದ್ಧಾ ಭಕ್ತಿಯಿಂದ ಪ್ರತಿ ವರ್ಷದಂತೆ ಆಚರಿಸಲಾಯಿತು.

ಉತ್ತಮ ಕ್ಷಮಾಧರ್ಮದಂದು ಧಾರ್ಮಿಕ ಚಿಂತಕರಾದ ಶ್ರೀ ಭರತ್ ರಾಜ್ ಮುಡಾರು, ಹಿರಿಯ ಶ್ರಾವಕಿ ಶ್ರೀಮತಿ ಮಾಘಮಾಲ, ಆಶ್ರಮದ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಅಶೋಕ್ ಕುಮಾರ್ ಬಲ್ಲಾಳ್, ಪ್ರಭಾತ್ ಕುಮಾರ್, ಕಾರ್ಕಳ ಜೈನ್ ಮಿಲನಿನ ಅಧ್ಯಕ್ಷರಾದ ಅಶೋಕ್ ಎಚ್ ಎಂ, ಆಶ್ರಮದ ಮೇಲ್ವಿಚಾರಕರಾದ ವೀರೇಂದ್ರ ಜೈನ್ ಇವರುಗಳು ದೀಪ ಬೆಳಗಿಸುವುದರ ಮೂಲಕ 10 ದಿನಗಳ ಕಾರ್ಯಕ್ರಮವನ್ನು ಉದ್ಘಾಟಿಸಿದರು..

ಪ್ರತಿದಿನ ಸಂಜೆ ಶ್ರೀ ಜಿನಪೂಜೆ, ಭಜನೆ, ಮಹಾಮಂಗಳಾರತಿ, ವಿದ್ವಾಂಸರಿಂದ ಉಪನ್ಯಾಸ, ತತ್ವಾರ್ಥ ಸೂತ್ರವಾಚನ, ನಿಲಯದ ವಿದ್ಯಾರ್ಥಿಗಳಿಂದ ಭಾಷಣ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಕೊನೆಯ ದಿನವಾದ ದಿನಾಂಕ 17.09.2024 ನೇ ಮಂಗಳವಾರ ಉತ್ತಮ ಬ್ರಹ್ಮಚರ್ಯ ಧರ್ಮದ ಆಚರಣೆಯಂದು ಆಶ್ರಮದ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಎಂಕೆ ವಿಜಯಕುಮಾರ್ ಇವರ ಅಧ್ಯಕ್ಷತೆಯಲ್ಲಿ ಕೋಶಾಧಿಕಾರಿಗಳಾದ ಎಸ್ ಅನಂತರಾಜ್ ಪೂವಣಿ ಮತ್ತು ಆಶ್ರಮದ ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷರಾದ ಬ್ರಹ್ಮದೇವ ಆರ್ ಕೆ ಕಳಸ ಇವರ ಗೌರವ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮವು ಜರುಗಿತು.

ಕಾರ್ಯಕ್ರಮದ ಆರಂಭದಲ್ಲಿ ಯೋಗರಾಜ್ ಶಾಸ್ತ್ರಿ ಇವರು ಸ್ವಾಗತಿಸಿದರು. ಪರ್ವದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ನಡೆಸಲಾದ ಧಾರ್ಮಿಕ ಮತ್ತು ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಆಶ್ರಮದ ಹಳೆ ವಿದ್ಯಾರ್ಥಿ ಸಂಘದ ಸದಸ್ಯರ ವತಿಯಿಂದ 7 ನೇ, 10 ನೇ ಮತ್ತು ದ್ವಿತೀಯ ಪಿಯುಸಿ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ತಲಾ ಇಬ್ಬರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪುರಸ್ಕರಿಸಲಾಯಿತು. ಇದೇ ಸಂದರ್ಭದಲ್ಲಿ ಆಶ್ರಮದ ಆಡಳಿತ ಮಂಡಳಿಯ ಸದಸ್ಯರಾದ ಬಿ. ಭರತ್ ರಾಜ್ ಇವರು ಪ್ರತಿವರ್ಷದಂತೆ ಇಬ್ಬರು ವಿದ್ಯಾರ್ಥಿಗಳ ಭೋಜನಶುಲ್ಕದ ವೆಚ್ಚವನ್ನು ದಾನವಾಗಿ ನೀಡಿದರು. ಅದೇ ರೀತಿ ದಿ| ಕೆ ನಾಗ ಕುಮಾರ ಇಂದ್ರ ಮತ್ತು ಇವರ ಧರ್ಮಪತ್ನಿ ದಿ| ವಿಜಯ ಲಕ್ಷ್ಮಿ ಇವರ ಸ್ಮರಣಾರ್ಥವಾಗಿ ಮೃತರ ಪುತ್ರಿ ಶ್ರೀಮತಿ ಬಬಿತಾ ಮಂಜುನಾಥ್ ಪ್ರಸಾದ್ ಇವರು ಮೂವರು ವಿದ್ಯಾರ್ಥಿಗಳಿಗೆ ಔಷಧ ದಾನವನ್ನು ಮಾಡಿದರು. ಹಾಗೆ ಕಾರ್ಕಳದ ಹಿರಿಯ ಶ್ರಾವಕರಾದ ಸಾಂತ್ರಬೆಟ್ಟು ಶ್ರೀಮತಿ ಪುಷ್ಪಾವತಿ ಅಮ್ಮ ಇವರು ಆಶ್ರಮದ ಭೋಜನ ನಿಧಿಗೆ ರೂ. 15000 ವನ್ನು ದಾನವಾಗಿ ನೀಡಿದರು.

ಪರ್ವದ ಹತ್ತು ದಿನಗಳ ಪೂಜಾ ಮತ್ತು ಇತರ ವೆಚ್ಚಗಳ ದಾನಿಗಳನ್ನು ಹಾಗೂ ಸಂಸ್ಥೆಗೆ ಧನ ಸಹಾಯ ಮಾಡಿದ, ವಿದ್ಯಾರ್ಥಿಗಳಿಗೆ ಸಿಹಿ ತಿಂಡಿ ವಿತರಿಸಿದ ಮಹನೀಯರುಗಳಿಗೆ ಕೃತಜ್ಞತೆ ಸಲ್ಲಿಸಲಾಯಿತು.

ಆಶ್ರಮದ ಸಹ ಮೇಲ್ವಿಚಾರಕರಾದ ಶ್ರೀ ಬಾಹುಬಲಿ ಇವರು ತತ್ವಾರ್ಥಸೂತ್ರ ಪಠಿಸಿದರು. ವಿದ್ಯಾರ್ಥಿಗಳಾದ ಉತ್ಸವ್ ಮತ್ತು ಧ್ರುವ ಪ್ರಾರ್ಥಿಸಿದರು. ಪವನ್ ವರದಿ ಮಂಡಿಸಿದರು. ಪಾರ್ಶ್ವನಾಥ್ ಸಂದೇಶ ವಾಚಿಸಿದರು. ಪ್ರಜ್ವಲ್ ಮತ್ತು ಹರ್ಷಿತ್ ವಿದ್ಯಾರ್ಥಿ ಭಾಷಣ ನೆರವೇರಿಸಿದರು. ರಜತ್ ಧನ್ಯವಾದ ಸಮರ್ಪಿಸಿದರು. ತೀರ್ಥನ್ ಇವರು ಕಾರ್ಯಕ್ರಮ ನಿರೂಪಿಸಿದರು. ಜಾಪ್ಯ ಮಂತ್ರ ಮತ್ತು ಶಾಂತಿಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page