
ಕಾರ್ಕಳ : ಶ್ರಿ ಶ್ರೀ ರವಿಶಂಕರ ವಿದ್ಯಾಮಂದಿರದಲ್ಲಿ ದಿ .12 ರಂದು ಓಪನ್ ಹೌಸ್ ಸಂದರ್ಭದಲ್ಲಿ ಪೋಷಕರಿಗೆ ಮತ್ತು ಮಕ್ಕಳಿಗಾಗಿ ನಿಟ್ಟೆ ಗಾಜ್ರಿಯ ಆಸ್ಪತ್ರೆಯ ವೈದ್ಯರಾದ ಡಾ.ನಮಿತಾ ಪಿ .ಕಾಮತ್, ಡಾ.ರಿಷಿತಾ ಪ್ರವಾಲಿಕ, ಡಾ.ಅಶ್ವಿತ ಅಜಿತ್ ಶೆಟ್ಟಿ ಇವರಿಂದ ಆರೋಗ್ಯ ಜಾಗೃತಿ ಕಾರ್ಯಕ್ರಮವು ನಡೆಯಿತು.ಸಾಮಾನ್ಯ ಆರೋಗ್ಯ ಮತ್ತು ಯೋಗಕ್ಷೇಮದ ಕುರಿತು ಮಾರ್ಗದರ್ಶನವನ್ನು ನೀಡಲಾಯಿತು. ಪೋಷಕರು ಮತ್ತು ಮಕ್ಕಳು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಂಡರು.





















