
ಮಂಗಳೂರು: ನಿನ್ನೆ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಧ್ವಜ ಅವರೋಹಣ ಮಾಡುವ ಸಂದರ್ಭದಲ್ಲಿ, ವಿದ್ಯುತ್ ಅವಘಡ ಸಂಭವಿಸಿ ಕ್ರೈಸ್ತ ಪಾದ್ರಿ ಯೊಬ್ಬರು ಮೃತಪಟ್ಟ ಘಟನೆ ಕಾಸರಗೋಡು ಜಿಲ್ಲೆಯ ಮುಳ್ಳೇರಿಯಲ್ಲಿ ನಡೆದಿದೆ.
ಇನ್ಫೆಂಟ್ ಜೀಸಸ್ ಚರ್ಚ್ ಪಾದ್ರಿ ಫಾ. ಮ್ಯಾಥ್ಯು ಕುಡಿಲಿಲ್ (30) ನಿನ್ನೆ ಸ್ವತಂತ್ರ ದಿನಾಚರಣೆಯ ನಂತರ ಸಂಜೆಯ ವೇಳೆಗೆ ಧ್ವಜ ಅವರೋಹಣ ಮಾಡುವ ವೇಳೆ ಧ್ವಜ ಸ್ತಂಭದ ಕಬ್ಬಿಣದ ಕಂಬ ವಾಲಿದ್ದು ವಿದ್ಯುತ್ ತಂತಿಗೆ ತಗುಲಿದೆ ಪರಿಣಾಮ ಪಾದ್ರಿ ವಿದ್ಯುತ್ ಶಾಕ್ ಗೆ ಒಳಗಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.













