ಹವ್ಯಾಸಿ ಮಹಿಳಾ ಕಲಾವಿದರು ಕಾರ್ಕಳ ಇವರಿಂದ “ನರಕಾಸುರ ವಧೆ ತಾಳಮದ್ದಳೆ”…

ಬಂಟರ ಸೇವಾ ಸಂಘ (ರಿ.) ಕುಕ್ಕುಂದೂರು ವತಿಯಿಂದ ಆಗಸ್ಟ್ 16ರ ಶುಕ್ರವಾರ ಶ್ರೀದೇವಿ ಕೃಪಾ ಸಭಾಭವನ ಕುಕ್ಕುಂದೂರು ಇಲ್ಲಿ 9ನೇ ವರ್ಷದ ಶ್ರೀ ವರಮಹಾಲಕ್ಷ್ಮಿ ಪೂಜೆ ನಡೆಯಲಿದೆ.
ಬೆಳಿಗ್ಗೆ 9:00 ರಿಂದ 11 ಗಂಟೆಯವರೆಗೆ ವರಮಹಾಲಕ್ಷ್ಮಿ ಪೂಜೆ ನಡೆಯಲಿದ್ದು ಮಧ್ಯಾಹ್ನ 12:30 ಕ್ಕೆ ಪ್ರಸಾದ ವಿತರಣೆ ನಂತರ ಅನ್ನಸಾರ್ಪಣೆ ನಡೆಯಲಿದೆ.

ತದನಂತರ, ಹರೀಶ್ ಶೆಟ್ಟಿ ಸೂಡ ಇವರ ನಿರ್ದೇಶನದಲ್ಲಿ ಹವ್ಯಾಸಿ ಮಹಿಳಾ ಕಲಾವಿದರು ಕಾರ್ಕಳ ಇವರಿಂದ “ನರಕಾಸುರ ವಧೆ ತಾಳಮದ್ದಳೆ”ನಡೆಯಲಿದೆ.
ಪೂರ್ಣಿಮಾ ಹೆಗ್ಡೆ ಇವರ ಸಂಯೋಜನೆಯಲ್ಲಿ, ಜಯಶ್ರೀ ಕೆ.ಎ ಶೆಟ್ಟಿ, ಜಯಂತಿ ಸುಧಾಕರ್ ಶೆಟ್ಟಿ, ಶಾಲಿನಿ ಡಿ ಆಳ್ವ, ಸುಪ್ರಿಯಾ ಕೆ ಶೆಟ್ಟಿ, ನಯನ ಎಲ್ ರೈ, ಪೃಥ್ವಿ ಎನ್.ಹೆಗ್ಡೆ ಅರ್ಥದಾರಿಗಳಾಗಿ ತಾಳಮದ್ದಳೆ ನಡೆಯಲಿದೆ.













