
ಹಾಸನ ಜಿಲ್ಲೆ ಅರಸೀಕೆರೆ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಧರ್ಮಸ್ಥಳದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಭವಿಷ್ಯವನ್ನು ನುಡಿದಿದ್ದು ಈ ಮೊದಲೇ ಇದು ವ್ಯವಸ್ಥಿತ ಅಪಪ್ರಚಾರ ಎಂದು ಹೇಳಿದ್ದರು.
ಪ್ರಚಾರ ವಿಚಾರ ಸಮಾಚಾರ ಅಪಪ್ರಚಾರ ಹೀಗೆ ಬರಬೇಕಾಗಿತ್ತು. ಆದರೆ, ಅಪಪ್ರಚಾರದಿಂದಾಗಿ ಮಾಡಿದವನು ನಾಶವಾಗುತ್ತಾನೆ ಎಂದು ಹೇಳಿರುವ ಶ್ರೀಗಳು ಬೆಳಕು ಇದ್ದಲ್ಲಿ ಕತ್ತಲು, ಬೆಳಕು ಬಂದ ಮೇಲೆ ಕತ್ತಲು ಹೋಗುತ್ತದೆ ಇದು ವಿಧಿ ನಿಯಮ, ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಒಳ್ಳೊಳ್ಳೆ ಗುಡಿಗಳ ಪೂಜೆಗಳು ನಿಲ್ಲುತ್ತಾ ಬರುತ್ತವೆ ಎಂದು ಕಾಲಜ್ಞಾನದಲ್ಲಿ ಹೇಳಲಾಗಿದೆ. ಎಲ್ಲಿ ನಿಧಿಯಿರುತ್ತೋ ಅಲ್ಲಿ ವಿಧಿಯಾಟವೂ ಜೋರಾಗಿ ಇರುತ್ತದೆ ಎಂದು ಹೇಳಿದ್ದಾರೆ.
“ನಿನಗಾಗಿ ಪಡುವಣದಲ್ಲಿ ರವಿ ಮೂಡುವನೇ, ಶಕ್ತಿ ಇದ್ದರೆ ಗೆಲ್ಲು, ಇಲ್ಲದಿದ್ದರೆ ಒದಿಸಿಕೋ. ದ್ವೇಷ, ಅಸೂಯೆ, ಮತ್ಸರ ಜಾಗತಿಕವಾಗಿ ತಾಂಡವಾಡುತ್ತದೆ. ಜನ ಸತ್ಯವನ್ನು ಸ್ವೀಕರಿಸುತ್ತಿಲ್ಲ. ಅರಸನ ಅರಮನೆಗೆ ಕಾರ್ಮೋಡ ಕವಿದೀತು, ರಾಜ್ಯ ಮತ್ತು ಕೇಂದ್ರದ ಬಗ್ಗೆ ನಾನು ಹೇಳುತ್ತಿರುವುದು” ಎಂದು ಕೋಡಿಮಠ ಸಂಸ್ಥಾನದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.