ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮಂಗಳೂರು ವಿಭಾಗಕ್ಕೆ ಆಯ್ಕೆಯಾದ ಮೊದಲ ಕ್ರೀಡಾಪಟು ಮನನ್ ವಿ.ಜೈನ್
ಶಾಸಕರಿಂದ ಮತ್ತು ಕ್ರಿಕೆಟ್ ಅಸೋಸಿಯೇಷನ್ ನಿಂದ ಸನ್ಮಾನ

ಕಾರ್ಕಳ ಆರ್ ಪಿ ಸಿ ಎ ಕ್ರಿಕೆಟ್ ತರಬೇತಿ ತಂಡದಿಂದ ಮನನ್ ವಿ.ಜೈನ್ ಇವರು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಮಂಗಳೂರು ವಿಭಾಗಕ್ಕೆ ಆಯ್ಕೆಯಾಗಿದ್ದಾರೆ.
ಕಾರ್ಕಳ ಕೆ ಎಸ್ ಸಿ ಎ ತಂಡದಿಂದ ಅಥವಾ ಕಾರ್ಕಳದಿಂದ ಆಯ್ಕೆಯಾದ ಮೊದಲ ಗ್ರಾಮೀಣ ಪ್ರತಿಭೆ,ಕ್ರೀಡಾಪಟುವಾಗಿದ್ದು, ಮನನ್ ವಿ. ಜೈನ್ ಇವರಿಗೆ ಶಾಸಕ ವಿ. ಸುನಿಲ್ ಕುಮಾರ್ ಮತ್ತು ಕ್ರಿಕೆಟ್ ಅಸೋಸಿಯೇಷನ್ ನಿಂದ ಸನ್ಮಾನಿಸಲಾಗಿದೆ.
ಇವರು ನಲ್ಲೂರು ವಿದ್ಯಾನಂದ ಜೈನ್ ಮತ್ತು ಶಕುಂತಲಾ ಜೈನ್ ಇವರ ಪುತ್ರ.ಹಾಗೂ ಪ್ರಸ್ತುತ ಕಾರ್ಕಳದ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಎಂಟನೇ ತರಗತಿಯ ವಿದ್ಯಾರ್ಥಿ. ಇವರು ಬೆಂಗಳೂರು, ಹುಬ್ಬಳ್ಳಿಯಲ್ಲಿ ನಡೆಯಲಿರುವ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ.



















