
ಉತ್ತರ ಪ್ರದೇಶ: ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದ ರಾಮಕಥೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಗದ್ಗುರು ರಾಮಭದ್ರಾಚಾರ್ಯರು ‘ಇಸ್ಲಾಂನಲ್ಲಿ ಮಹಿಳೆಯರನ್ನು 25 ಮಕ್ಕಳನ್ನು ಹೆರುವಂತೆ ಮಾಡಲಾಗುತ್ತದೆ ಮತ್ತು ನಂತರ ತ್ರಿವಳಿ ತಲಾಖ್ ನೀಡಿ ಎಸೆಯಲಾಗುತ್ತದೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಹಿಂದೂ ಧರ್ಮದಷ್ಟು ಉದಾರ ಧರ್ಮ ಇನ್ನೊಂದಿಲ್ಲ. ಹಿಂದೂ ಧರ್ಮದಲ್ಲಿ ಮಹಿಳೆಯರನ್ನು ದೇವತೆಯರಂತೆ ಕಾಣಲಾಗುತ್ತದೆ, ಆದರೆ ಇತರ ಧರ್ಮಗಳಲ್ಲಿ ಅವರನ್ನು ‘ಬೀಬಿ’ ಎಂದು ಕರೆಯಲಾಗುತ್ತದೆ. ಹಿಂದೂಗಳಲ್ಲಿ ಮಹಿಳೆಯರು ದೈವ ಸ್ವರೂಪಿಯಾಗಿದ್ದರೆ, ಇಸ್ಲಾಂನಲ್ಲಿ ಮಹಿಳೆಯರು ದುಃಖಿತರಾಗಿದ್ದಾರೆ. ಅವರನ್ನು 25 ಮಕ್ಕಳನ್ನು ಹೆರುವಂತೆ ಮಾಡಿ, ನಂತರ ತ್ರಿವಳಿ ತಲಾಖ್ ನೀಡಿ ಎಸೆಯಲಾಗುತ್ತದೆ. ಇಂತಹ ಬಳಕೆ ಮತ್ತು ಎಸೆಯುವಿಕೆ ನಮ್ಮ ದೇಶದಲ್ಲಿ ಪ್ರಚಲಿತವಾಗಿಲ್ಲ ಎಂದು ಹೇಳಿದ್ದಾರೆ.
ರಾಮಭದ್ರಾಚಾರ್ಯರ ಈ ಹೇಳಿಕೆಯು ಉತ್ತರ ಪ್ರದೇಶದಲ್ಲಿ ಧಾರ್ಮಿಕ ಮತ್ತು ರಾಜಕೀಯ ಒಡಕು ಸೃಷ್ಟಿಸಿ ತೀವ್ರ ಚರ್ಚೆಗೆ ಕಾರಣವಾಗಿದೆ.













