
ಕಾರ್ಕಳ:-ಆಳ್ವಾಸ್ ನುಡಿಸಿರಿ-ವಿರಾಸತ್ ಕಾರ್ಕಳ ಘಟಕದ ವತಿಯಿಂದ ಡಿಸೆಂಬರ್ ೩ರಂದು ಕಾರ್ಕಳದ ಗಾಂಧಿ ಮೈದಾನದಲ್ಲಿ ನಡೆಯಲಿರುವ ಆಳ್ವಾಸ್ ಸಾಂಸ್ಕೃತಿಕ ವೈಭವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯ ಬಿಡುಗಡೆ ಕಾರ್ಕಳದ ಪ್ರಕಾಶ್ ಹೋಟೆಲ್ ನ ಸಂಭ್ರಮ ಸಭಾಂಗಣದಲ್ಲಿ ನಡೆಯಿತು. ಆಹ್ವಾನ ಪತ್ರಿಕೆಯನ್ನು ರಂಗ ಸಂಸ್ಕೃತಿಯ ಅಧ್ಯಕ್ಷರಾದ ಎಸ್ ನಿತ್ಯಾನಂದ ಪೈ ಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ನುಡಿಸಿರಿ-ವಿರಾಸತ್ ಘಟಕದ ಅಧ್ಯಕ್ಷ ವಿಜಯ ಶೆಟ್ಟಿ, ಪದಾಧಿಕಾರಿಗಳಾದ ಮೋಹನ ಪಡಿವಾಳ್, ಎನ್ ಪ್ರಭಾತ್ ಕುಮಾರ್, ನಿರಂಜನ್ ಜೈನ್, ಪಾರ್ಶ್ವನಾಥ ವರ್ಮ, ರಾಮಚಂದ್ರ ನೆಲ್ಲಿಕಾರ್, ರೇಷ್ಮಾ ಯು ಶೆಟ್ಡಿ, ಅವಿನಾಶ್ ಜಿ ಶೆಟ್ಟಿ, ಅಂಬರೀಶ್ ಚಿಪ್ಳೂಣ್ ಕರ್ , ಆನಂದರಾಯ ನಾಯಕ್ ,ಸಂತೋಷ್ ರಾವ್ , ತಿಪ್ಪೇಸ್ವಾಮಿ, ಉಪಸ್ಥಿತರಿದ್ದರು, ನುಡಿಸಿರಿ -ವಿರಾಸತ್ ಘಟಕದ ಮಾಧ್ಯಮ ಪ್ರತಿನಿಧಿ ಗಣೇಶ್ ಜಾಲ್ಸೂರು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಪ್ರಭಾಕರ ಶೆಟ್ಟಿ ಕೊಂಡಳ್ಳಿ ನಿರೂಪಿಸಿ ವಂದಿಸಿದರು.



















