ಬಿ.ಕೆ ಹರಿಪ್ರಸಾದ್ ಹೇಳಿಕೆ

ಬೆಂಗಳೂರು: ಗಾಂಧಿ ಭವನದಲ್ಲಿ ಆಯೋಜಿಸಿದ ಕಾರ್ಯಕ್ರಮ ವೊಂದರಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಆರ್ ಎಸ್ ಎಸ್ ಸಂಘದ ಬಗ್ಗೆ ಕಿಡಿ ಕಾರಿದ್ದಾರೆ.
ಅದೊಂದು ರೂಮರ್ಸ್ ಸ್ಪ್ರೆಡ್ಡಿಂಗ್ ಸಂಘ. ಅಲ್ಲಿ ಕಳ್ಳನನ್ನು ಸುಳ್ಳ ಹಾಗೂ ಸುಳ್ಳನನ್ನು ಸತ್ಯವಂತ ಎಂದು ಹೇಳುತ್ತಾರೆ. ಬಡವರು ಮತ್ತು ಅಮಾಯಕ ರನ್ನು ಧರ್ಮದ ಹೆಸರಲ್ಲಿ ದಾರಿ ತಪ್ಪಿಸಲಾಗುತಿದೆ. ತಾವು ದೇಶಭಕ್ತರು ಎನ್ನುವ ಆರ್ ಎಸ್ ಎಸ್ ನವರು ತ್ರಿವರ್ಣ ಧ್ವಜಕ್ಕೆ ಗೌರವ ಕೊಡುವುದಿಲ್ಲ .52 ವರ್ಷ ಆರ್ ಎಸ್ ಎಸ್ ಕಚೇರಿಯ ಮೇಲೆ ಧ್ವಜ ಹಾರಿಸಿಲ್ಲ ಎಂದು ಹೇಳಿದ್ದಾರೆ.
ಸಂಘ ಪರಿವಾರದ ಸಹವಾಸದಿಂದ ಹೋರಾಟ ಮಾಡಿದವರು ಒಂದು ಜೈಲಿಗೆ ಹೋಗಬೇಕು.ಇಲ್ಲ ಸ್ಮಶಾನ ಸೇರಬೇಕು. ಇನ್ನು ಬಿಜೆಪಿಯದಿಂದಯಾಳ್ ಉಪಾಧ್ಯಾಯ ರವರನ್ನು ಕೊಂದವರು ಯಾರು? ಎಂದು ಪ್ರಶ್ನಿಸುವ ಮೂಲಕ ಸಂಘ ಪರಿವಾರದ ಕುರಿತು ಟೀಕೆ ವ್ಯಕ್ತಪಡಿಸಿದ್ದಾರೆ.













