
ಹಾಸನ : ಕೆರೆಯ ಮೀನು ತಿಂದು ಹದಿನೈದಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥರಾದ ಇಬ್ಬರು ಮೃತಪಟ್ಟ ಘಟನೆ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬಸವಹಳ್ಳಿ ಗ್ರಾಮದಲ್ಲಿ ನಡೆದಿದೆ.
ಬಸವಹಳ್ಳಿ ಗ್ರಾಮದ ರವಿಕುಮಾರ (46), ಸನ್ಯಾಸಿಪುರದ ಪುಟ್ಟಮ್ಮ (50) ಮೃತ ವ್ಯಕ್ತಿಗಳು ಅಸ್ವಸ್ಥರಾದ ಹದಿನೈದಕ್ಕೂ ಹೆಚ್ಚು ಮಂದಿ ಅರಕಲಗೂಡು ಹಾಗೂ ಹಾಸನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.ತಾಯಿಯನ್ನ ಮಾತನಾಡಿಕೊಂಡು ಹೋಗಲು ತವರಿಗೆ ಬಂದಿದ್ದ ಪುಟ್ಟಮ್ಮ. ಮೀನು ತಿನ್ನುವ ಆಸೆಗೆ ಬಸವನಹಳ್ಳಿ ಗ್ರಾಮದ ಕೆರೆಗೆ ಮೀನು ಹಿಡಿಯಲು ಹೋಗಿದ್ದರು. ಆದರೆ ಈ ಬಾರಿ ತೀವ್ರ ಬರಗಾಲ ಹಿನ್ನೆಲೆ ಕೆರೆಯಲ್ಲಿ ನೀರಿಲ್ಲದೆ ಬತ್ತಿಹೋಗಿದೆ. ಕೆರೆಯ ಕೆಸರಿನಲ್ಲಿ ಸಿಕ್ಕ ಮೀನುಗಳನ್ನೇ ಹಿಡಿದು ತಂದಿದ್ದ ಗ್ರಾಮಸ್ಥರು. ಕೆಸರಿನಲ್ಲಿ ಸಿಕ್ಕ ಮೀನುಗಳನ್ನೇ ಬಳಸಿ ಅಡುಗೆ ಮಾಡಿಕೊಂಡು ಊಟ ಮಾಡಿರುವ ಗ್ರಾಮಸ್ಥರು. ಊಟದ ಬಳಿಕ ರವಿಕುಮಾರ ಪುಟ್ಟಮ್ಮ ಮೃತಾರಾಗಿದ್ದಾರೆ ಹದಿನೈದಕ್ಕೂ ಹೆಚ್ಚು ಮಂದಿ ತೀವ್ರ ಅಸ್ವಸ್ಥಗೊಂಡಿದ್ದಾರೆ.