“ಯುವ ಸಮುದಾಯವು ಸೈಬರ್ ಅಪರಾಧಗಳ ಕುರಿತು ಜಾಗೃತರಾಗಬೇಕು” : ಸಂತೋಷ್

ಸಮಕಾಲೀನ ಜಗತ್ತಿನಲ್ಲಿ ತಂತ್ರಜ್ಞಾನದ ಬೆಳವಣಿಗೆಯಿಂದ ಅನೇಕ ಪ್ರಯೋಜನಗಳನ್ನು ಪಡೆಯುತ್ತಿರುದಾಗಿಯೂ ಸಹ ಇದೇ ತಂತ್ರಜ್ಞಾನ ದುರುಪಯೋಗದಿಂದ ಸೈಬರ್ ಅಪಾರಧಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು ಎಲ್ಲಾ ವರ್ಗಗಳ ಜನರೂ ಇದರ ಬಲಿಪಶುಗಳಾಗುತ್ತಿದ್ದಾರೆ.ಯುವ ಸಮುದಾಯದ ಭಾಗವಾಗಿರುವ ವಿದ್ಯಾರ್ಥಿಗಳು ಈ ಕುರಿತು ಜಾಗೃತರಾಗಿ ಇತರರಲ್ಲಿಯೂ ಜಾಗೃತಿಯನ್ನು ಮೂಡಿಸಬೇಕು ಎಂದು ಹಿರಿಯಡಕ ಆರಕ್ಷಕ ಠಾಣೆಯ ಹೆಡ್ ಕಾನ್ಸ್ಟೇಬಲ್ ಸಂತೋಷ್ ರವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಐ.ಕ್ಯೂ.ಎ.ಸಿ, ರಾಜ್ಯಶಾಸ್ತ್ರ ವಿಭಾಗ, ಮತ್ತು ಆರಕ್ಷಕ ಠಾಣೆ ಹಿರಿಯಡಕದ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯಡಕದಲ್ಲಿ ನಡೆದ “ಸೈಬರ್ ಅಪಾರಧ ತಡೆ ಕಾಯ್ದೆ, ಫೋಕ್ಸೊ ಮತ್ತು ನೂತನ ಅಪರಾಧ ಸಂಹಿತೆಗಳ ಕುರಿತು ಅರಿವು ಕಾರ್ಯಕ್ರಮ”ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಇವರು ಮಾತನಾಡಿದರು. ಜುಲೈ 1 2024 ರಿಂದ ನೂತನ ಭಾರತೀಯ ನ್ಯಾಯಸಂಹಿತೆ, ಭಾರತ್ ನಾಗರೀಕ ಸುರಕ್ಷಾ ಸಂಹಿತೆ, ಭಾರತ್ ಸಾಕ್ಷ್ಯ ಅಧಿನಿಯಮಗಳು ಜಾರಿಯಾಗಲಿದ್ದು ಬ್ರಿಟಷ್ ಕಾಲದಿಂದಲೂ ಅಸ್ತಿತ್ವದಲ್ಲಿ ಅಪಾರಧ ಸಂಹಿತೆ ಅಧಿನಿಯಮಗಳಲ್ಲಿ ಗಮನಾರ್ಹ ಬದಲಾವಣೆಗಳಾಗುವುದರಿಂದ ಈ ಬಗ್ಗೆ ವಿದ್ಯಾರ್ಥಿ ಸಮುದಾಯಕ್ಕೆ ಅರಿವು ಮೂಡಿಸುವುದರ ಜೊತೆಗೆ ಸೈಬರ್ ಅಪರಾಧ ತಡೆ ಕಾಯ್ದೆ,ಫೋಕ್ಸೋ ಕಾಯ್ದೆ, ಡ್ರಗ್ಸ್ ನಿಷೇಧ ಕಾಯ್ದೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ಸೀಮಾ ಜಿ.ಕೆ ಮಾತನಾಡಿ ಎಲ್ಲಾ ಕಾಯ್ದೆಗಳೂ ನಾಗರೀಕರ ಸಮಾಜದ ರಕ್ಷಣೆಗಾಗಿಯೇ ಇರುವುದರಿಂದ ವಿದ್ಯಾರ್ಥಿಗಳು ಈ ಬಗ್ಗೆ ಅರಿವು ಮೂಡಿಸಿಕೊಂಡು ಸಮುದಾಯದಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಕೈ ಜೋಡಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಐ.ಕ್ಯೂ.ಎ.ಸಿ ಸಂಚಾಲಕ ಪ್ರವೀಣ್ ಶೆಟ್ಟಿ,ಭೋದಕ-ಭೋದಕೇತರ ವರ್ಗದವರು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು.ಪ್ರೇಮಾ ಮತ್ತು ತಂಡ ಪ್ರಾರ್ಥಿಸಿದರು.ಸುಭಾಷ್ ಹೆಚ್ ಕೆ ನಿರೂಪಿಸಿ ಸ್ವಾಗತಿಸಿದರು.ಪ್ರವೀಣ್ ಶೆಟ್ಟಿ ವಂದಿಸಿದರು